Dr G Parameshwar: ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ

ಹುಬ್ಬಳ್ಳಿ ಬ್ರೇಕಿಂಗ್: ಜೈನ ಮುನಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರು ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯ ತನಿಖೆಯಲ್ಲಿ ತಾರತಮ್ಯದ ಮಾಡುತಿದ್ದಾರೆ ಆರೋಪ ಮಾಡಿರುವ  ವಿಚಾರವಾಗಿ ಮಾತನಾಡಿದ್ದಾರೆ.

ಇಂತಹ ಘಟನೆ ನಡೆದಾಗ ಯಾರು ಕೂಡ ತಾರತಮ್ಯ ಮಾಡೋಕೆ ಹೋಗೋದಿಲ್ಲ.ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಪೊಲೀಸರು ಮಾಡ್ತಾರೆ.ಇದು ಸ್ವಾಭಾವಿವಾಗಿ ಆಗುವ ಪದ್ಧತಿ. ಅದರಲ್ಲಿ ತಾರತಮ್ಯದ ಪ್ರಶ್ನೆ ಬರೋದಿಲ್ಲ. ಘಟನೆ ನಡೆದ ಮೇಲೆ ಪೊಲೀಸರಿಗೆ ವಿಚಾರಗೊತ್ತಾಗಿ ಕಂಪ್ಲೇಂಟ್ ಆದಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಬೋರ್ವೆಲ್ ನಲ್ಲಿ ಹಾಕಿದಂತ ದೇಹವನ್ನು ತೆಗೆಸಿ ಕ್ರಮ ತೆಗೆದುಕೊಂಡಿದ್ದಾರೆ. ನಮ್ಮ ಇಲಾಖೆಗೆ ಅಭಿನಂದನೆ ಹೇಳ್ತೇನೆ ಅವರು ಶೀಘ್ರವಾಗಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ  ಜೈನ ಮುನಿಗಳು ಉಪವಾಸ ಮಾಡಿದ್ರು. ಅವರೊಂದಿಗೆ ನೆನ್ನೆ ನಾನು ಸಹ ಮಾತನಾಡಿದ್ದೇನೆ ಅವರ ಬೇಡಿಕೆಯನ್ನು ಕೇಳಿ ಭರವಸೆ ಕೊಡೋಕೆ ಬಂದಿದ್ದೇವೆ

ಸಿಬಿಐ ತನಿಖೆಗೆ ಕೊಡಿ ಎಂದ ಜೋಶಿ ಹೇಳಿಕೆ

ನಮ್ಮ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ. ಅವರನ್ನು ಬಂಧಿಸಿದ್ದಾರೆ ತನಿಖೆ ಆರಂಭ ಆಗಿದೆ ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲಾ ನಮ್ಮ ಇಲಾಖೆ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ತಿಳಿದು ಬರುತ್ತೆ ಸುಮ್ನೆ ಆಪಧನೆ ಮಾಡೋದು ಸರಿಯಿಲ್ಲ. ಕಾನೂನು ಕ್ರಮ ಕೈಗೊಳ್ಳುತ್ತೆ ಪೊಲೀಸರು ಪಕ್ಷಾತೀತವಾಗಿ ಪ್ರೆಶರ್ ಇಲ್ಲದೇ ಕೆಲಸ ಮಾಡ್ತಾ ಇದ್ದಾರೆ.

Fact check:ಮೋದಿಜಿ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ

ಸಂಸದೆಯನ್ನು ಚುಡಾಯಿಸಿದಾತ ಜೈಲುಪಾಲು..!

ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿ ಗೆಲ್ಲಲಿಲ್ಲವೆಂದು ಪತಿ ಮಾಡಿದ್ದೇನು ಗೊತ್ತಾ..? Viral Video ..

About The Author