- Advertisement -
Political News: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ದೋಸ್ತಿ ಆಗಬಹುದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮೊನ್ನೆಯಷ್ಟೆ ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸಭೆ ಸದನದಲ್ಲಿ ಪ್ರಧಾನಿ ಮೋದಿಯವರ ಜೊತೆ 4 ವರ್ಷಗಳ ಹಿಂದಿನ ಮಾತುಕತೆ ರಹಸ್ಯ ಬಯಲು ಮಾಡಿದ್ರು.
ಕುಮಾರಸ್ವಾಮಿ ಅವರ ನಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಬಹುದು ಎಂಬ ಚರ್ಚೆಯನ್ನೂ ಹುಟ್ಟು ಹಾಕಿದೆ. ಬಿಜೆಪಿ ಜೊತೆ ದೋಸ್ತಿ ಎಂಬ ಚರ್ಚೆಗಳು ನಡೆಯುತ್ತಿರೋ ಬೆನ್ನಲ್ಲೆNDA ಸಭೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋಗ್ತಾರಾ ಎಂಬ ಪ್ರಶ್ನೆಗಳು ಶುರುವಾಗಿದೆ. ಜುಲೈ 18ರಂದು ದೆಹಲಿಯಲ್ಲಿ NDA ಮೈತ್ರಿ ಕೂಟಗಳ ಸಭೆ ಇದೆ. ಈ ಸಭೆಗೆ ಭಾಗವಹಿಸುವ ಹಿನ್ನೆಲೆ ಸೋಮವಾರ ದೆಹಲಿಗೆ ಹೆಚ್ಡಿಕೆ ಹೋಗ್ತಾರೆ ಎಂದು ಹೇಳಲಾಗಿದೆ.
- Advertisement -