ಹುಬ್ಬಳ್ಳಿ: ಭಾರಿ ಮಳೆಯಿಂದಾಗಿ ನಗರ ಮತ್ತು ಗ್ರಾಮಗಳಲ್ಲಿ ಮರ ಧರೆಗುರುಳಿ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಪ್ರತಿದಿನ ಕೇಳುತ್ತೇವೆ. ಇದು ಮಳೆಗಾಲ ಮುಗಿಯುವವರೆಗೂ ಜನರ ಪರಗಾಟ ತಪ್ಪಿದ್ದಲ್ಲ ಅದೇ ತರ ಬೇರೆ ಬೇರೆ ಪ್ರಾಣಿಗಳು ಸಹ ಮಳೆಗೆ ಬಲಿಯಾಗುತ್ತವೆ.
ವಿದ್ಯುತ್ ತಂತಿ ತಗುಲಿ ಎಮ್ಮೆಯೊಂದು ಸಾವನ್ನಪ್ಪಿದ ಘಟನೆ ನಗರದ ಆನಂದನಗರ ಕ್ರಾಸ್ ನ ಇಂಡಿಪಂಪ್ ಬಳಿ ನಡೆದಿದೆ.ಕಳೆದ ಕೆಲವು ದಿನಗಳಿಂದ ನಿರಂತರ ಜಡಿ ಮಳೆಗೆ ವಿದ್ಯುತ್ ಕಂಬಗಳು ತೆವಾಂಶದಿಂದ ಕಂಬಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದೆ ಆದ ಕಾರಣ ಎಮ್ಮೆಯೊಂದು ಮೇಯಲು ಹೋದಾಗ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ.
ಹೆಸ್ಕಾಂ ನಿರ್ಲಕ್ಷ್ಯಕ್ಕೆ ಮೂಕ ಪ್ರಾಣಿ ಬಲಿಯಾಗಿದ್ದು, ಹೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಘಟನಾ ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿ ಹಾಗೂ ಪಾಲಿಕೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
House visit: ಹುಬ್ಬಳ್ಳಿಯಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಸಚಿವ ಸಂತೋಷ ಕಾರ್ ಬೇಟಿ
Rain: ವರುಣಾರ್ಭಟಕ್ಕೆ ತತ್ತರಿಸಿದ ಧಾರವಾಡ ರೈತರು..! ಬೆಳೆಗಳಿಗೆ ದಿಗ್ಭಂದನ
National Highway : ಧಾರಾಕಾರ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ..!