Friday, June 20, 2025

Latest Posts

Saleem ahamed; ಬಿಜೆಪಿಯವರು ರಸ್ತೆಯಲ್ಲಿ ನಿಂತರೂ ಮೋದಿ ಅವರನ್ನು ನೋಡಲೇ ಇಲ್ಲ..!

- Advertisement -

ರಾಜಕೀಯ ಸುದ್ದಿ:ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ಸಿ ಸಲೀಂ ಅಹ್ಮದ್ ಅವರು ಬಿಜೆಪಿ ವಿರುದ್ದ ಕಿಡಿಕಾರಿದರು.

ನಾವು ಘೋಷಣೆ ಮಾಡಿರೋದನ್ನ ಅನುಷ್ಠಾನಕ್ಕೆ ತಂದಿದ್ದೇವೆ ಬಿಜೆಪಿ ಕಳೆದ 9 ವರ್ಷಗಳಿಂದ ಏನು ಮಾಡಿದೆ ಬಿಜೆಪಿ ಇಷ್ಟು ಬೇಗ ಘೋಷಣೆ ಅನುಷ್ಠಾನಕ್ಕೆ ತರ್ತಾರೆ ಅಂದುಕೊಂಡಿರಲಿಲ್ಲ ಇದು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಬಿಜೆಪಿಯವರಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೆ ಇರೋದು ದುರ್ದೈವ ಎಂದು ಮರುಕ ವ್ಯಕ್ತಪಡಿಸಿದರು

ನಮ್ಮ ಕಾರ್ಯಕ್ರಮ ಕಣ್ಣಿಂದ ನೋಡಿ ಅಂದ್ರೆ ಅವರು ಎಕ್ಸರೇ ಗಾಜಿನಿಂದ ನೋಡ್ತೀದಾರೆ. ಚುನಾವಣೆ ಸೋಲಿನ ಬಳಿಕವೂ ಬಿಜೆಪಿಗೆ ಅರ್ಥ ಆಗತಿಲ್ಲ. ರಸ್ತೆಯಲ್ಲಿ ನಿಂತು ಪ್ರಧಾನಿ ನೋಡೋಕೆ ಹೋದ್ರು  ಆದ್ರೆ ಮೋದಿ ಅವರನ್ನು ನೋಡಲೇ ಇಲ್ಲ ಇದು ಮೋದಿ ಅವರು ಮಾಡಿದ ಕಪಾಳ ಮೋಕ್ಷ ಎಂದು ಬಿಜೆಪಿಯವರನ್ನು  ಕಾಲೆಳೆದರು.

ನಮ್ಮ ವಿರುದ್ದ ಟೀಕೆ ಮಾಡೋ ನೈತಿಕತೆ ಇಲ್ಲ. ಕಳೆದ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಮತ್ತು ಬೆಡ್ ಖರೀದಿಯಲ್ಲಿ ನೂರಾರು ಕೋಟಿ ರೂಗಳ ಹಗರಣ ನಡೆದಿದೆ ಇದೀಗ ನೂರು ದಿನದಲ್ಲಿ ಎಲ್ಲದರ ಕುರಿತು ತನಿಖೆಗೆ ಕೊಟ್ಟಿದ್ದೇವೆ. ಸುಧಾಕರ್ ತಪ್ಪು ಮಾಡಿಲ್ಲ ಎಂದರೆ ಯಾಕೆ ಹೆದರಬೇಕು ಅವರು ಮಾಡಿರುವ ಭ್ರಷ್ಟಾಚಾರ ರಾಜ್ಯಕ್ಕೆ ತಿಳಿದಿದೆ.ಬರುವ ದಿನಗಳಲ್ಲಿ ತಪ್ಪು ಮಾಡಿದವರಿಗೆ ಅಗ್ನಿ ಪರೀಕ್ಷೆ ಕಾದಿದೆ.

ಇನ್ನು ಕೆಂದ್ರದಿಂದ ಸಿಲಿಂಡರ್ ಬೆಲೆ ಕಡಿಮೆ ಮಾಡಲು ಕಾರಣವೇ ಲೋಕಸಭೆ ಚುನಾವಣೆ ಇಷ್ಟುದಿನ  ಮೋದಿಯವರಿಗೆ ಬೆಲೆ ಏರಿಕೆ ಬಗ್ಗೆ ತಿಳಿದಿರಲಿಲ್ಲ ಅಂತ ಕಾಣುತ್ತೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಲೆ ಇಳಿಕೆ ಮಾಡಿದ್ದಾರೆ.ಕರ್ನಾಟಕದಲ್ಲಿ ಮೋದಿ ಹಲವು ಬಾರಿ ರೋಡ್ ಶೋ ಮಾಡಿದರೂ ಜನ ಕಾಂಗ್ರೆಸ್ ಗೆ ಮತ ನೀಡಿದ್ದಾರೆ ರಾಜ್ಯದ ಚುನಾವಣೆಯ ಬಿಸಿ ಮೋದಿಗೆ ಮುಟ್ಟಿದೆ. ಅವರ ಸಮಯ ಮುಗಿದಿದೆ ಅವರನ್ನು ಜನ ಮನೆಗೆ ಕಳುಹಿಸುತ್ತಾರೆ. ದೇಶದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೆ ನೀಡಿದರು.

Railway Flyover: ಹಾಸನಾಂಬ ಉತ್ಸವದೊಳಗೆ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

MLC Saleem Ahamed: ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು

‘ನಿವೃತ್ತ ನ್ಯಾಯಮೂರ್ತಿಗಳ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು’

- Advertisement -

Latest Posts

Don't Miss