Tuesday, April 8, 2025

Latest Posts

ಹತ್ತು ಜಿಲ್ಲೆಗಳಲ್ಲಿ ಬರಪೀಡಿತ ಎಂದು ಅಧ್ಯಯನ ತಂಡ ಘೋಷಿಸಿದೆ; ಜಾರಕಿಹೊಳಿ..!

- Advertisement -

ಚಿಕ್ಕೋಡಿ : ಸಚಿವರಾದ ಬಳಿಕ ಪ್ರತಿ ತಾಲೂಕಿನಲ್ಲಿ ಕೆಡಿಪಿ ಸಭೆ ಮಾಡೋದಾಗಿ ಸಚಿವ ಸತೀಶ್ ಜಾರಕಿ ಹೊಳಿ ಹೇಳಿದ್ದರು. ಇದೇ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಸಭೆ ಮಾಡಿದ್ದೇನೆ.  ಶಾಸಕರ ಬಳಿ ಮಾತನಾಡಿ ದಿನಾಂಕ ನಿಗದಿ ಮಾಡಿ ಸದ್ಯದಲ್ಲೇ ಚಿಕ್ಕೋಡಿಯಲ್ಲೂ ಸಭೆ ನಡೆಸುವುದಾಗಿ ಜಾರಕಿಹೊಳಿ ತಿಳಿಸಿದರು.

ಕೇಂದ್ರ ಬರ ಅಧ್ಯಯನ ತಂಡ ಚಿಕ್ಕೋಡಿ ಉಪವಿಭಾಗಕ್ಕೆ ಭೇಟಿ ನೀಡದ ವಿಚಾರ: ಬರ ಅಧ್ಯಯನ ತಂಡ 194 ತಾಲೂಕುಗಳಿಗೂ ಹೋಗಲ್ಲ, ರ್ಯಾಂಡಮ್ ಆಗಿ ಚೆಕ್ ಮಾಡ್ತಾರೆ. ಈಗಾಗಲೇ ಬರಪೀಡಿತ ತಾಲೂಕುಗಳ ಘೋಷಣೆಯಾಗಿದ್ದೂ ತಂಡ ಇಲ್ಲಿ ಬರಬೇಕು ಅಂತೇನಿಲ್ಲ. ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಬರ ಅಧ್ಯಯನ ತಂಡ ಹೋಗಿದೆ ಬರ ಘೋಷಣೆ ಮಾಡಿದ್ದು ಅದರ ಲಾಭ ಏನು ಸಿಗಬೇಕಿದೆ ಅದು ಇಲ್ಲೂ ಸಿಗುತ್ತೆ. ಬರದೇ ಹೋದ್ರೆ ತಾರತಮ್ಯ ಅಂತೇನಿಲ್ಲ, ಗೋಕಾಕ್, ಮೂಡಲಗಿಗೂ ಬಂದಿಲ್ಲ, ಅದಕ್ಕೂ ಇದಕ್ಕೂ ಲಿಂಕ್ ಮಾಡೋದು ಅವಶ್ಯಕತೆ ಇಲ್ಲ ಎಂದ ಸತೀಶ್ ಜಾರಕಿಹೊಳಿ ಹೇಳಿದರು.

ಕೇಂದ್ರ ಬರ ಅಧ್ಯಯನ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು  ಬಿಜೆಪಿ ನಾಯಕರ ಆರೋಪ ಮಾಡುತ್ತಿರುವುದಕ್ಕೆ

ನಾವು ಉಪಸಮಿತಿಯಲ್ಲಿ ಹೇಳಿದ್ದೇವೆ, ಸಿಎಂ ಸಭೆ ಮಾಡಿ ಹೇಳಿದ್ದಾರೆ. ನಾವು ಮನವರಿಕೆ ಮಾಡಿ ಹೇಳೋದಲ್ಲ ಅವರಿಗೆ ತಿಳಿಯಬೇಕು ಸ್ವಂತಕ್ಕೆ ನಾವು ಹೇಳಿದ್ರೆ ವರದಿ ಕೊಡಲ್ಲ, ವಸ್ತು ಸ್ಥಿತಿ ಇದ್ರೆ ಮಾತ್ರ ವರದಿ ಕೊಡ್ತಾರೆ ಇನ್ಫ್ಲೂಯೆನ್ಸ್ ಮಾಡೋ ಅವಶ್ಯಕತೆ ಇಲ್ಲ, ನಿಜವಾದ ವರದಿ ಅವರೇ ಕೊಡ್ತಾರೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

- Advertisement -

Latest Posts

Don't Miss