Sunday, June 22, 2025

Latest Posts

DK Shivakumar: ಇಂದು ಹುಕ್ಕೇರಿಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ..!

- Advertisement -

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಿರೇಮಠ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಜಿಗಳು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹುಕ್ಕೇರಿಗೆ ಭೇಟಿ ವಿಚಾರವಾಗಿ. ನೊಣವಿನಕೆರೆ ಪರಮಪೂಜ್ಯಾ ರೇಣುಕಾ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ವಿಚಾರವಾಗಿ ಹೇಳಿಕೆ ನೀಡಿದರು.

ಹುಕ್ಕೇರಿ ಹಿರೇಮಠದ ದಸರಾ ಉತ್ಸವ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ, ನೊಣವಿನಕೆರೆ ಪರಮಪೂಜ್ಯರಿಗೆ ರೇಣುಕ ಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ. ಚಲನಚಿತ್ರ ಗೀತಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್‌ರಿಗೆ ಡಾ.ಸ.ಜ.ನಾಗಲೋತಿಮಠ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದೇವೆ. ಈ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಡಿಸಿಎಂ ಡಿಕೆಶಿ ಬರುತ್ತಿದ್ದಾರೆ.

ಇಂದು ಮಧ್ಯಾಹ್ನ 3ಗಂಟೆಗೆ ಹುಕ್ಕೇರಿ ಶ್ರೀಮಠಕ್ಕೆ ಭೇಟಿ ನೀಡ್ತಾರೆ. 9 ದಿನ ನಡೆಯುತ್ತಿರುವ ಚಂಡಿಕಾ ಯಾಗದಲ್ಲಿ ಭಾಗಿಯಾಗುತ್ತಾರೆ. ದಸರಾಗೆ ವಿಶೇಷ ಅಂದ್ರೆ ಚಂಡಿಕಾ ಯಾಗ, ಇಂದು ನಾಲ್ಕನೆಯ ದಿನದ ಚಂಡಿಕಾ ಯಾಗದಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆಸಂಜೆ 6.30ಕ್ಕೆ ನೊಣವಿನಕೆರೆ ಶ್ರೀಗಳಿಗೆ ರೇಣುಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಭಾಗಿಯಾಗುತ್ತಾರೆ ಎಂದ ಹುಕ್ಕೇರಿ ಹಿರೇಮಠದ ಸ್ವಾಮೀಜಿ ಹೇಳಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಗೌರವ ಡಾಕ್ಟರೇಟ್

‘ಜನ ತಿರಸ್ಕಾರ ಮಾಡಿ ಮನೆಗೆ ಕಳಸಿದ್ರು, ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಏನು ನೈತಿಕತೆ ಇದೆ..?’

 

- Advertisement -

Latest Posts

Don't Miss