- Advertisement -
Dharwad News: ಧಾರವಾಡ: ಧಾರವಾಡದಲ್ಲಿ ದೃಶ್ಯವೊಂದು ಕಂಡುಬಂದಿದ್ದು, ಮಳೆ ಬರುವಾಗಲೇ ಹಿರಿಯ ಜೀವಿ ತಪಸ್ಸಿಗೆ ಕುಳಿತಿದ್ದಾರೆ.
ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ವೃದ್ಧ ತಪಸ್ಸಿಗೆ ಕುಳಿತಿದ್ದು, ನಟ್ಟ ನಡು ರಸ್ತೆಯಲ್ಲೇ ವೃದ್ಧ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇನ್ನು ಇವರು ಯಾಕೆ ತಪಸ್ಸಿಗೆ ಕುಳಿತಿದ್ದಾರೆ ಅಂದ್ರೆ, ಕಳೆದ 2 ವರ್ಷಗಳಿಂದ ಸರಿಯಾಗಿ ಮಳೆ ಬರದ ಕಾರಣ, ರೈತರು ಕಂಗಾಲಾಗಿದ್ದರು. ಹಾಗಾಗಿ ಮಳೆ ಬರಲಿ ಎಂದು ಈ ವ್ಯಕ್ತಿ ರೈತರ ಪರವಾಗಿ, ತಪಸ್ಸಿಗೆ ಕುಳಿತಿದ್ದರು.
ಇವರ ತಪಸ್ಸಿನ ವೀಡಿಯೋ, ಸ್ಥಳದಲ್ಲೇ ಇದ್ದ ಓರ್ವ ಯುವಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೃದ್ಧನ ತಪಸ್ಸು ಕಂಡು ಜನ ಹಲವು ರೀತಿಯಲ್ಲಿ ಮಾತನಾಡಿಕೊಂಡಿದ್ದಾರೆ.
- Advertisement -