ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ 17 ಜನರು ಜೈಲು ಸೇರಿದ್ದಾರೆ. ದರ್ಶನ್ ಮೇಲೆ ಕೊಲೆ ಆರೋಪ ಇದ್ರೂ, ಅವರ ಮೇಲೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಡಿಮೆ ಆಗಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸ ದಿನ ಕಳೆಯುತ್ತಿದ್ದಾರೆ. ಅವರನ್ನು ನೋಡಬೇಕು ಎಂದು ಪ್ರತಿ ದಿನ ಅನೇಕ ಅಭಿಮಾನಿಗಳು ಜೈಲಿನ ಬಳಿ ಬರುತ್ತಿದ್ದಾರೆ. ಇಲ್ಲಿ ಒರ್ವ ದಾಸಪ್ಪ, ದರ್ಶನ್ ಬಿಡುಗಡೆಗಾಗಿ ಹರಸಾಹಸ ಮಾಡುತ್ತಿದ್ದಾನೆ.
ದರ್ಶನ್ ಅಭಿಮಾನಿ ಆಗಿರುವಂತಹ ದಾಸಪ್ಪ ಜೈಲಿನ ಮುಂದೆ ಹೋಗಿ ದರ್ಶನಗೋಸ್ಕರ ಶಂಕ ಊದಿದ್ದಾನೆ. ಆ ವಿಡಿಯೋ ಈಗ ಫುಲ್ ವೈರಲ್ ಆಗ್ತಾ ಇದೆ. ಈ ದಾಸಪ್ಪ 10 ವರ್ಷಗಳಿಂದ ದರ್ಶನ್ ಅಭಿಮಾನಿ ಯಾಗಿದ್ದು, ಜಡೆ ಮಾಯಸಂದ್ರದಿಂದ ಬಂದಿದ್ದ..
ಇನ್ನು ದರ್ಶನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ದಾಸಪ್ಪ, “ದರ್ಶನ್ ಒಳ್ಳೆಯವರು ಅವರೇನು ತಪ್ಪು ಕೆಲಸ ಮಾಡಿಲ್ಲ. ಅವರು ಬೇಗ ಜೈಲಿನಿಂದ ಹೊರಗಡೆ ಬರ್ತಾರೆ ಎಂದು ಹೇಳಿದ್ದಾನೆ. ದರ್ಶನ್ಗೆ ಯಾರಾದ್ರೂ ಸಹಾಯ ಮಾಡಿ. ದರ್ಶನ್ ಬಿಡುಗಡೆ ಆಗ್ಬೇಕು ಎಂದು ಕೇಳಿಕೊಂಡಿದ್ದಾರೆ”. ದರ್ಶನ್ಗೆ ಏನೂ ಆಗಬಾರದು. ಅವರು ಅಭಿಮಾನಿಗಳ ದೇವರು. ನಾನು 10 ವರ್ಷದಿಂದ ದರ್ಶನ್ ಅಭಿಮಾನಿ. ಅವರನ್ನು ತುಂಬಾ ಸಲ ಭೇಟಿಯಾಗಿದ್ದೆ. ನನ್ನನ್ನು ಚನ್ನಾಗಿಯೆ ಮಾತನಾಡಿಸಿದ್ದಾರೆ. ಅಣ್ಣ ಬೇಗ ಜೈಲಿನಿಂದ ಬಿಡುಗಡೆಯಾಗಬೇಕು. ಅವರ ಬಿಡುಗಡೆಗೆ ನಾನು ಎನೂ ಬೇಕಿದ್ದರು ಮಾಡಲು ಸಿದ್ದ ಎಂದಿದ್ದಾನೆ.
ದರ್ಶನ್ ಬಿಡುಗಡೆಗಾಗಿ ಗೃಹ ಮಂತ್ರಿಗಳಾದ ಜಿ ಪರಮೇಶ್ವರ್ ಬಳಿ ತೆರಳಿದ್ದ. ಆದರೆ ದಾಸಪ್ಪನನ್ನ ಅಲ್ಲಿರುವ ಸೆಕ್ಯೂರಿಟಿ ತಡೆದಿದ್ದಾರೆ. ಗೃಹ ಸಚಿವರ ಗೇಟ್ ಮುಂದೆಯೇ ನಿಂತು ದಾಸಪ್ಪ ಮರುಗಿದ್ದಾನೆ. ಎಷ್ಟು ಹೋತ್ತಾದರು ಸೆಕ್ಯೂರಿಟಿ ಸಿಬ್ಬಂದಿ ಗೃಹ ಸಚಿವರನ್ನು ಭೇಟಿಯಾಗಲು ಬಿಡಲಿಲ್ಲ. ಆದ ಕಾರಣ ಅಲ್ಲಿಂದ ಮರಳಿದ್ದಾನೆ. ಹೀಗಾಗಿ, ಪರಪ್ಪನ ಅಗ್ರಹಾರದ ಮುಂದೆ ನಿಂತು ಶಂಕವನ್ನು ಊದಿದ್ದಾನೆ .
ಒಟ್ನಲ್ಲಿ ಅಭಿಮಾನಿಗಳು ಜೈಲಿನ ಮುಂಭಾಗ ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ . ಅದು ಅಭಿಮಾನವೂ ತಮ್ಮ ಮೆಚ್ಚಿನ ನಾಯಕನ ಮೇಲಿರುವ ಹುಚ್ಚು ಅಭಿಮಾನವೂ ಗೊತ್ತಿಲ್ಲ.