ಇವರನ್ನೇ ಸಿಎಂ ಮಾಡಿ ಅಂತಾ ಹೇಳೋದು ಮಠಾಧೀಶರ ಕೆಲಸವಲ್ಲಃ ಜಯಮೃತ್ಯುಂಯ ಸ್ವಾಮೀಜಿ

Hubli News: ಹುಬ್ಬಳ್ಳಿ: ಯಾವುದೇ ಸರಕಾರದಲ್ಲಿ ಇವರನ್ನೇ ಮುಖ್ಯಮಂತ್ರಿ ಮಾಡಿ ಅಂತಾ ಹೇಳೋದು ಮಠಾಧೀಶರ ಕೆಲಸವಲ್ಲ ಎಂದು ಕೂಡಲಸಂಗಮ ಪಂಚಮಸಾಲಿ‌ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮುಖ್ಯಮಂತ್ರಿ ಮಾಡೋದು ಆಡಳಿತ ಪಕ್ಷದ ಶಾಸಕರ ಕೆಲಸ ಸಲಹೆ ಕೇಳಿದ್ರೆ ಸಮಾಜದ ಗುರುಗಳಾಗಿ ಸಲಹೆ ಕೊಡಬೇಕು. ಮೀಸಲಾತಿ ಪಾದಯಾತ್ರೆಯ ನಂತರ ಇವರನ್ನೇ ಮಂತ್ರಿ ಮಾಡಿ ಅಂತಾ ಹೇಳೋದು ಬಿಟ್ಟಿದ್ದೇವೆ. ನಮ್ಮ ಗುರಿಯೇನಿದ್ದರೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸೋದು ಎಂದ ಅವರು, ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಪೂರ್ತಿಪಡೆದು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂಧಿಸಿ ಮೀಸಲಾತಿ ಕೊಡುತ್ತೆ ಅನ್ನೋ ಎಂದರು.

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಸಿಗುವವರೆಗೆ ಹೋರಾಟ ಮಾಡುತ್ತೇವೆ
ರಾಜ್ಯ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ 2A ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸದ ಅವರು ಅಧಿವೇಶನದಲ್ಲಿ ಮೀಸಲಾತಿ ಹಕ್ಕು ಪ್ರತಿಪಾದಿಸಲು ಪಂಚಮಸಾಲಿ ಸಮಾಜದ ಶಾಸಕರನ್ನು ಒತ್ತಾಯಿಸಲಾಗುವುದು.

ಜುಲೈ 6ರಂದು ಹುಬ್ಬಳ್ಳಿಯಲ್ಲಿ ಪತ್ರ ಚಳುವಳಿ ನಡೆಯಲಿದೆ. ಶಾಸಕ ಎಮ್‌.ಆರ್. ಪಾಟೀಲ್, ಅರವಿಂದ ಬೆಲ್ಲದ್ ಮನೆಗೆ ಹೋಗಿ ಆಗ್ರಹ ಪತ್ರ ನೀಡಲಾಗುವುದು. ನಮ್ಮ ಶಾಸಕರು ಅಧಿವೇಶನದಲ್ಲಿ ಮೀಸಲಾತಿಗೆ ಆಗ್ರಹಿಸದೆ ಇರುವುದು ಸಮಾಜಕ್ಕೆ ನಿರಾಸೆ ಮೂಡಿಸಿದೆ ಎಂದರು.

About The Author