ಇಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸುವ ದಿನ. ರಕ್ಷಾಬಂಧನ ಅಂದ್ರೆ ಅಣ್ಣತಂಗಿಯರ ಬಾಂಧ್ಯವವನ್ನ ಹೆಚ್ಚಿಸುವ ಹಬ್ಬವಾಗಿದ್ದು, ಅಣ್ಣನಿಗೆ ರಾಖಿ ಕಟ್ಟಿ, ಅವನ ಹಣೆಗೆ ತಿಲಕವನ್ನಿಟ್ಟು, ಶುಭಾಶಯವನ್ನ ಕೋರುವ ದಿನ. ಇಂತಹ ಹಬ್ಬವನ್ನು ಸ್ಯಾಂಡಲ್ವುಡ್ನ ನಟಿ ಸೋನಲ್ ಮಂಥೆರೋ ತಮ್ಮ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರನ್ನ ಸೋನಲ್ ತನ್ನ ಸ್ವಂತ ಅಣ್ಣನಂತೆ ಕಾಣುತ್ತಾರೆ. ಆದರೆ ಇಂದು ಅಣ್ಣ ಜೊತೆಗಿಲ್ಲದಿರುವುದನ್ನ ಕಂಡು ಸೋನಲ್, ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲು ಸೇರಿ 2 ತಿಂಗಳಾಗಿದೆ. ಡಿಬಾಸ್ ನಟನೆಯ ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ದರ್ಶನ್ ತಂಗಿ ಸಮಾನವಾದ, ವಿನೋದ್ ಪ್ರಭಾಕರ್ಗೆ ಜೋಡಿಯಾಗಿ ನಟಿಸಿದ್ರು. ನಂತರ ಸೋನಲ್ ಹಾಗೂ ದರ್ಶನ್ ಬಾಂಧವ್ಯ ಹೆಚ್ಚಾಗಿದ್ದು, ಅವತ್ತಿನಿಂದ ಇಲ್ಲಿಯವರೆಗೂ ಸೋನಲ್, ದರ್ಶನ್ ಅವರಿಗೆ ರಾಖಿ ಕಟ್ಟುತ್ತಾ ರಕ್ಷಾ ಬಂಧನವನ್ನ ಆಚರಿಸುತ್ತಿದ್ದರು. ಆದರೆ ಈ ವರ್ಷ ಅಣ್ಣ ಜೊತೆಗಿಲ್ಲದ್ದರಿಂದ ರಾಖಿ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಇತ್ತೀಚೆಗೆ ಸೋನಲ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ಸಪ್ತಪದಿ ತುಳಿದಿದ್ರು. ತರುಣ್ ಹಾಗೂ ದರ್ಶನ್ ತುಂಬಾ ಆಪ್ತ ಗೆಳೆಯರು. ಇಬ್ಬರಿಗೂ ತುಂಬಾ ಹತ್ತಿರವಾದ ದರ್ಶನ್, ಸದ್ಯ ಜೈಲಿನಲ್ಲಿರೋದ್ರಿಂದ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ.
ಈ ಹಿಂದೆ ಡಿಬಾಸ್ಗೆ ಸೋನಲ್ ರಾಖಿ ಕಟ್ಟಿದ್ದ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆದ್ರೆ ಈ ಬಾರಿ ರಕ್ಷಾ ಬಂಧನದಂದು ದರ್ಶನ್ ಇಲ್ಲದಿರುವುದರಿಂದ ಭಾವುಕರಾದ ಸೋನಲ್ ‘ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಸದಾ ನಾವು ನಿನ್ನ ಪ್ರೀತಿಸುತ್ತೇವೆ ಅಣ್ಣಾ. ರಕ್ಷಾ ಬಂಧನದ ಶುಭಾಶಯಗಳು’ ಅಂತ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
– ಸ್ವಾತಿ.ಎಸ್.