Friday, June 20, 2025

Latest Posts

Kolkata Doctor Rape-Murder Case: ಮರಣೋತ್ತರ ಪರೀಕ್ಷೆಯ ಟೈಮ್​ಲೈನ್​ ಬಗ್ಗೆ ಬಂಗಾಳ ಪೊಲೀಸರನ್ನು ಪ್ರಶ್ನಿಸಿದ ಸುಪ್ರೀಂ

- Advertisement -

ನವದೆಹಲಿ: ಕೋಲ್ಕತ್ತಾದ ಆರ್.ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣ ಸದ್ಯ ದೇಶಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿಸಿದೆ.. ಇದೀಗ ಸ್ವತಃ ಮಾನ್ಯ ಸರ್ವೋಚ್ಛ ನ್ಯಾಯಾಲಯ (Supreme Court)ವೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಪ್ರಶ್ನೆಗಳನ್ನ ಎತ್ತಿದೆ.. ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಡಿ.ವೈ.ಚಂದ್ರಚೂಡ್ (CJI DY Chandrachud)​ ನೇತೃತ್ವದ ಪೀಠ, ಸಂತ್ರಸ್ತೆಯ ಮರಣೋತ್ತರ ಪರೀಕ್ಷೆ (post-mortem) ನಡೆದ ಸಮಯ ಹಾಗೂ ಅಪರಾಧವನ್ನ ಅಸಹಜ ಸಾವು (case of unnatural death) ಎಂದು ದಾಖಲಿಸಿರುವ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಪೊಲೀಸರನ್ನು ಮತ್ತೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

Powers and functions of the Supreme Court - iPleaders

‘‘ಇದು ಅಸಹಜ ಸಾವಿನ ಪ್ರಕರಣವಲ್ಲವಾದ್ರೆ ಮರಣೋತ್ತರ ಪರೀಕ್ಷೆ (post-mortem) ನಡೆಸಲು ಅಷ್ಟು ಸಮಯತೆಗೆದುಕೊಂಡಿದ್ದು ಯಾಕೆ..? ಮೃತದೇಹ ಬೆಳಗ್ಗೆ 9.30ಕ್ಕೆ ಪತ್ತೆಯಾದ್ರೂ ರಾತ್ರಿ 11.45ಕ್ಕೆ ಎಫ್​ಐಆರ್ (FIR) ದಾಖಲಾಗಿದೆ. ಅಷ್ಟೊತ್ತು ಬಂಗಾಳ ಪೊಲೀಸರು ಏನ್ಮಾಡ್ತಿದ್ರಿ..? ಮರಣೋತ್ತರ ಪರೀಕ್ಷೆಯ ಸಂಜೆ 6.10ಕ್ಕೆ ಆರಂಭವಾಗುತ್ತೆ. ರಾತ್ರಿ 8.10ಕ್ಕೆ ಪೋಸ್ಟ್​ ಮಾರ್ಟಂ ಕೊನೆಗೊಳ್ಳುತ್ತೆ. ರಾತ್ರಿ 11.30ಕ್ಕೆ ಧಾಲ ಪೊಲೀಸ್​ ಸ್ಟೇಷನ್​ನಲ್ಲಿ ಯುಡಿ ಪ್ರಕರಣ ದಾಖಲಾಗಿದೆ. ರಾತ್ರಿ 11.45ಕ್ಕೆ ಎಫ್​ಐಆರ್ ದಾಖಲಾಗಿದೆ. ಎಫ್​ಐಆರ್​ನಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ (case of unnatural death) ಅಂತ ನೊಂದಾಯಿಸಿದ್ದೇಕೆ..? ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳೋ ಮುಂಚಿತವಾಗಿ ಮರಣೋತ್ತರ ಪರೀಕ್ಷೆ ನಡೆದಿರೋದು ಅಚ್ಚರಿ ಎನಿಸ್ತಿದೆ’’ ಅಂತ ಬಂಗಾಳ ಪೊಲೀಸರನ್ನು ಸುಪ್ರೀಂ ನ್ಯಾಯಪೀಠ ಪ್ರಶ್ನಿಸಿದೆ. ಈ ವೇಳೆ ಮಧ್ಯಪ್ರವೇಶಿಸಿದ ‘‘ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ (Justice J B Pardiwala) ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಈ ರೀತಿ ನಡೆದಿರೋದನ್ನ ನೋಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಸಹಜ ಸಾವಿನ ವರದಿ ನೀಡಿರೋದು ನಿಜವೇ’’ ಅಂತ ಪಶ್ಚಿಮ ಬಂಗಾಳ ಸರ್ಕಾರವನ್ನ ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ (Tushar Mehta) ‘‘ಪ್ರಕರಣ ನಡೆದು 5 ದಿನವಾದ್ಮೇಲೆ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದೆ. ಸಿಬಿಐ ತನಿಖೆ ಆರಂಭವಾಗುವಷ್ಟರಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಎಲ್ಲವನ್ನೂ ಬದಲಾವಣೆ ಮಾಡಲಾಗಿದೆ’’ ಅಂತ ವಾದ ಮಾಡಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ‘‘ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್​ ಸಿಬಲ್ (Kapil Sibal) ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗೇ ಪಾಲನೆ ಮಾಡಲಾಗಿದೆ’’ ಅಂತ ಕೋರ್ಟ್​ಗೆ ತಿಳಿಸಿದ್ದಾರೆ. ಮುಂದಿನ 3 ವಾರಗಳಲ್ಲಿ ಮಧ್ಯಂತರ ವರದಿ ಹಾಗೂ 2 ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವಂತೆ ಕಾರ್ಯಪಡೆಗೆ ಸೂಚನೆ ನೀಡಿರುವ ಸುಪ್ರೀಂಕೋರ್ಟ್​ ತ್ರಿದಸ್ಯ ಪೀಠ ವಿಚಾರಣೆಯನ್ನ ಸೆಪ್ಟೆಂಬರ್ 5ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

- Advertisement -

Latest Posts

Don't Miss