Dharwad : ಜೈಲಿಗೆ ಬಂದ ಎರಡನೇ ದಿನವೇ ಧನರಾಜ್‌ಗೆ ಚಿಕನ್ ಊಟ

ಧಾರವಾಡ: ಶುಕ್ರವಾರಕ್ಕೊಮ್ಮೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಮಾಂಸಾಹಾರ ನೀಡಲಾಗುತ್ತದೆ. ಒಂದು ಶುಕ್ರವಾರ ಚಿಕನ್ ಕೊಟ್ಟರೆ ಮತ್ತೊಂದು ಶುಕ್ರವಾರ ಮಟನ್ ನೀಡಲಾಗುತ್ತದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ A9 ಆರೋಪಿಯಾಗಿರುವ ಧನರಾಜ್‌ನನ್ನು ನಿನ್ನೆ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

 

ನಿನ್ನೆಯಷ್ಟೇ ಧಾರವಾಡ ಜೈಲಿಗೆ ಶಿಫ್ಟ್ ಆದ ಧನರಾಜ್‌ಗೆ ಇಂದು ಚಿಕನ್ ಊಟ ಕೊಡಲಾಗಿದೆ. ಬೆಳಿಗ್ಗೆ ಉಪ್ಪಿಟ್ಟು ಉಪಹಾರ ಕೊಟ್ಟಿದ್ದ ಸಿಬ್ಬಂದಿ, ಮಧ್ಯಾಹ್ನ ಚಿಕನ್ ಊಟವನ್ನು ಕೊಡಲಾಗಿದೆ.

About The Author