Chennai News: ಆರ್ಡರ್ ಮಾಡಿದ ವಸ್ತುವನ್ನು ಡಿಲೆವರಿ ಬಾಯ್ ಲೇಟ್ ಆಗಿ ಆರ್ಡರ್ ಮಾಡಿದ್ದಾನೆ ಎಂದು ಕೋಪಗೊಂಡ ಮಹಿಳೆ, ಡಿಲೆವರಿ ಬಾಯ್ಗೆ ಹಿಗ್ಗಾಮುಗ್ಗಾ ಬೈದಿದ್ದು, ಈ ಕಾರ್ಣಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಪವಿತ್ರನ್ ಎಂಬ ವಿದ್ಯಾರ್ಥಿ, ಬಿಕಾಂ ಓದುತ್ತ, ತನ್ನ ಶಿಕ್ಷಣ ಮತ್ತು ಇತರ ಖರ್ಚನ್ನು ನಿಭಾಯಿಸಲು ಪಾರ್ಟ್ ಟೈಮ್ ಡಿಲೆವರಿ ಬಾಯ್ ಕೆಲಸ ಮಾಡುತ್ತಿದ್ದ. ಆರ್ಡರ್ ಬಂದಿದ್ದ ವಸ್ತುವನ್ನು ಡಿಲೆವರಿ ಮಾಡಲು ಆತ ಕಷ್ಟಪಟ್ಟು ಆ ಜಾಗವನ್ನು ತಲುಪಿದ್ದರೂ ಕೂಡ, ಮನೆಯ ಅಡ್ರೆಸ್ ಸಿಗಲಿಲ್ಲ. ಒಂದೆರಡು ಸಲ ಕಾಲ್ ಮಾಡಿದರೂ, ಸಮಯಕ್ಕಿಂತ ಸ್ವಲ್ಪ ಹೊತ್ತು ಲೇಟಾಗಿಯೇ ಆತ ವಸ್ತುವನ್ನು ಡಿಲೆವರಿ ಮಾಡಿದ.
ಆದರೆ ಡಿಲೆವರಿ ಪಡೆದ ಮಹಿಳೆ, ಕೋಪಗೊಂಡು ಆತನಿಗೆ ಹಿಗ್ಗಾಮುಗ್ಗಾ ಬೈದಿದ್ದಾಳೆ. ಆರ್ಡರ್ ಸಮಯಕ್ಕೆ ಸರಿಯಾಗಿ ತಲುಪಿಸಲು ಆಗಲಿಲ್ಲ ಅಂತಾ ಕೋಪ ಮಾಡಿದ್ದಾಳೆ. ಅಲ್ಲದೇ, ಕಂಪನಿಗೆ ಕಾಲ್ ಮಾಡಿ, ಆತನ ವಿರುದ್ಧ ದೂರು ಹೇಳಿ, ಇನ್ನು ಮುಂದೆ ನಮ್ಮ ಮನೆಗೆ ಈತನ್ನನ್ನು ಡಿಲೆವರಿಗೆಂದು ಕಳಿಸಬೇಡಿ ಎಂದಿದ್ದಾರೆ. ಇದೊಂದು ರೀತಿ ಅವಮಾನಕರ ಘಟನೆಯಾಗಿರುವುದರಿಂದ, ಯುವಕ ಎರಡು ದಿನದಿಂದ ಮೌನವಾಗಿ ಬೇಸರವಾಗಿದ್ದ.
ಬಳಿಕ ಸೇಡು ತೀರಿಸಿಕೊಳ್ಳಬೇಕು ಎಂದು, ಆಕೆಯ ಮನೆಯ ಬಳಿ ಹೋಗಿ, ಆಕೆಯ ಮನೆಗೆ ಕಲ್ಲು ತೂರಿದ್ದಾನೆ. ಹೀಗಾಗಿ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಯಾದ ಕಾರಣಕ್ಕೆ, ಪೊಲೀಸರು ಠಾಣೆಗೆ ಕರೆಸಿ, ಬುದ್ಧಿ ಹೇಳಿ ಕಳುಹಿಸಿದ್ದಾರೆ. ಆದರೆ, ತಾನು ಠಾಣೆಯ ತನಕ ಹೋಗಬೇಕಾದ ಪರಿಸ್ಥಿತಿ ಬಂತು ಎಂದು ಬೇಸರಗೊಂಡು, ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.