Sunday, September 8, 2024

Latest Posts

ಸುಶಾಂತ್ ಸಾವಿನ ಬಗ್ಗೆ ಕಂಗನಾ ಹೇಳಿದ್ದೇನು..? ಈಕೆಯ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹೆಚ್ಚಾಗಿದ್ದೇಕೆ..?

- Advertisement -

ಬಾಲಿವುಡ್‌ನಲ್ಲಿ ಈಗ ನೆಪೋಟಿಸಮ್ ಬಗ್ಗೆ ಅಂದ್ರೆ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿದ್ದು, ಕೆಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್‌ನ್ನ ಕಳೆದುಕೊಂಡ್ರೆ, ಇನ್ನು ಕೆಲವರು ಈ ಚರ್ಚೆಯ ಮೂಲಕ ಫಾಲೋವರ್ಸ್‌ನ್ನ ಹೆಚ್ಚಿಸಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೇ ಫೇಮಸ್ ಆದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆ್ಯಕ್ಟ್ರೆಸ್ ಅಂದ್ರೆ ಕಂಗನಾ ರಾಣಾವತ್. ತನ್ನ ನಟನೆಯಿಂದ ಹಲವು ಪ್ರಶಸ್ತಿ ಗಳಿಸಿರುವ ಕಂಗನಾ, ಇರುವುದನ್ನು ಇದ್ದಂತೆ ಹೇಳಲು ಎಂದೂ ಹಿಂಜರಿದಿಲ್ಲ.

ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಾಲಿವುಡ್ ಪರದೆ ಮೇಲೆ ಮಿಂಚುತ್ತಿರುವ ಕ್ವೀನ್ ಕಂಗನಾ,ಇಂದು ಸೋಶಿಯಲ್ ಮೀಡಿಯಾದಲ್ಲಿ ನೆಪೋಟಿಸಮ್ ವಿಚಾರದಲ್ಲಿ ಸುದ್ದಿಯಾಗಿರುವ ನಟಿ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಬಗ್ಗೆ ಮಾತನಾಡಿರುವ ಕಂಗನಾ, ಬಾಲಿವುಡ್‌ನ ಹಲವು ಗಣ್ಯರ ರಿಯಾಲಿಟಿ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟಿ ಕಂಗನಾ, ಬಾಲಿವುಡ್‌ನಲ್ಲಿ ಟ್ಯಾಲೆಂಟ್ ಇದ್ದವರಿಗೆ ಬೆಲೆ ಕೊಡಲಾಗುತ್ತಿಲ್ಲ. ಅಂಥವರ ಚಿತ್ರವನ್ನ ಪಕ್ಕಕ್ಕಿರಿಸಿ ಪಾರ್ಷಿಯಾಲಿಟಿ ಮಾಡಲಾಗುತ್ತಿದೆ. ಅವಾರ್ಡ್ ಬರುವಂಥ ಚಿತ್ರವನ್ನ ಮೂಲೆಗುಂಪು ಮಾಡಲಾಗುತ್ತಿದೆ. ಒಳ್ಳೆಯ ಟ್ಯಾಲೆಂಟ್ ಇರುವ ವ್ಯಕ್ತಿಗಳನ್ನ ಸಪೋರ್ಟ್ ಮಾಡದೇ, ಅಂಥವರು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಲಾಗುತ್ತಿದೆ. ಇದೇ ಸುಶಾಂತ್ ಸಿಂಗ್ ಸಾವಿಗೆ ಕಾರಣವಾಗಿರುವುದು. ಸುಶಾಂತ್ ಸ್ವತಃ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಚಿತ್ರವನ್ನ ನೋಡಿ ಸಪೋರ್ಟ್ ಮಾಡಿ, ಇಲ್ಲದಿದ್ದರೆ ನನ್ನನ್ನು ಸಿನಿ ಇಂಡಸ್ಟ್ರಿಯಿಂದ ತೆಗೆದುಹಾಕುತ್ತಾರೆ ಎಂದು ಕೇಳಿಕೊಳ್ಳುತ್ತಿದ್ದರು. ಛಿಛೋರೆ, ಧೋನಿ ಲೈಫ್ ಸ್ಟೋರಿಯಂಥ ಸೂಪರ್ ಹಿಟ್ ಚಿತ್ರ ಕೊಟ್ಟವನು, ಇಂಜಿನಿಯರಿಂಗ್‌ನಲ್ಲಿ ರ್ಯಾಂಕ್ ಪಡೆದವನು ಹೇಗೆ ಮಾನಸಿಕ ಅಸ್ವಸ್ಥನಾಗಲು ಸಾಧ್ಯ..? ಎಂದು ಕಂಗನಾ ಪ್ರಶ್ನಿಸಿದ್ದಾರೆ.

https://youtu.be/F9RiUtFPnvM

ಬಾಲಿವುಡ್ ಕರಾಳ ಮುಖದ ಬಗ್ಗೆ ಕಂಗನಾ ಹೇಳಿಕೆ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕರಣ್ ಜೋಹರ್, ಆಲಿಯಾ ಭಟ್, ಶಾರುಖ ಖಾನ್ ಫಾಲೋವರ್ಸ್‌ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ, ಕಂಗನಾ ರಾಣಾವತ್ ಫಾಲೋವರ್ಸ್‌ ಸಂಖ್ಯೆ ಹೆಚ್ಚಾಗಿದೆ.

- Advertisement -

Latest Posts

Don't Miss