Sunday, September 8, 2024

Latest Posts

ಹುಬ್ಬಳ್ಳಿಯಲ್ಲಿ ಇಂದು ಅಮಿತ್ ಷಾ ಕಾರ್ಯಕ್ರಮ

- Advertisement -

political news.

ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ, ಜನವರಿ 28: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಕಿತ್ತೂರು ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಎಫ್. ಎಸ್.ಎಲ್ ಲ್ಯಾಬ್ ಅಡಿಗಲ್ಲು, ಕೆ.ಎಲ್.ಇ ಸೊಸೈಟಿ ಬಿವಿಬಿ ಕಾಲುಕಿನ 75 ನೇ ವಾರ್ಷಿಕೋತ್ಸವ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಧಾರವಾಡ ಜಿಲ್ಲೆಯ ಬೂತ್ ಮಟ್ಟದ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂ.ಕೆ ಹೋಬಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಮಂಡಲದ ಮೇಲೆ ಇರುವ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ ಎಂದರು.

ಕರ್ನಾಟಕದಲ್ಲಿ ರಾಷ್ಟ್ರೀಯ ನಾಯಕರ ಪ್ರಭಾವ
ಕಿತ್ತೂರು ಕರ್ನಾಟಕ ಭಾಜಪದ ಭದ್ರಕೋಟೆ. ಅಮಿತ್ ಷಾ ಅವರು ಸಮಗ್ರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಡ್ಯಕ್ಕೆ ಬಂದು ಹೋಗಿದ್ದರು, ಈಗ ಕಿತ್ತೂರು ಕರ್ನಾಟಕ , ಮುಂದಿನ ತಿಂಗಳು ಹೈದರಾಬಾದ್ ಕರ್ನಾಟಕ ಕ್ಕೆ ಭೇಟಿ ನೀಡಲಿದ್ದಾರೆ ಎಂದರು. ನಮ್ಮ ಪಕ್ಷ, ಪಕ್ಷದ ಸಂಘಟನೆ ನಿರಂತರವಾಗಿ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಪ್ರಗತಿ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ರಾಷ್ಟ್ರೀಯ ನಾಯಕರ ಪ್ರಭಾವ ಕರ್ನಾಟಕದ ರಾಜಕಾರಣದಲ್ಲಿ ಆಗುತ್ತಿದೆ. ಪಕ್ಷ ಅದರ ಬಳಕೆ ಮಾಡುತ್ತಿದೆ ಎಂದರು.

ಭಿನ್ನಮತವಿಲ್ಲ
ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಅಂಥದ್ದು ಎಲ್ಲಿಯೂ ಅಭಿವ್ಯಕ್ತವಾಗಿಲ್ಲ. ಪಕ್ಷದ ಬೆಳವಣಿಗೆ ಮುಖ್ಯ. ಎಲ್ಲರೂ ಅದಕ್ಕೇ ಶ್ರಮಿಸಬೇಕು. ಬೆಳಗಾವಿ, ಧಾರವಾಡ, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ಒಂದು ಗುರಿಯಿದೆ. ಗುರಿ ಸಾಧನೆಗಾಗಿ ಈ ಸಂಘಟನೆ ಮಾಡುತ್ತಿದ್ದೇವೆ ಎಂದರು.

ಡಿಕೆಶಿಗೆ ಬಿಜೆಪಿ ಸಿಂಹಸ್ವಪ್ನ
ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಹೀಗಾಗಿ ಕನಸಿನಲ್ಲೂ ಬಿಜೆಪಿ ಕಾಣುತ್ತಾರೆ ಎಂದರು.

ಎಂದಿನಂತೆ ಕೆಲಸ
ತಮ್ಮ ಹುಟ್ಟುಹಬ್ಬ ವಿಶೇಷವೇನಲ್ಲಾ. ಜನ ಬರುತ್ತಾರೆ. ಪ್ರತಿನಿತ್ಯ ಮಾಡುವಂತೆಯೇ ಕೆಲಸ ಮಾಡುತ್ತೇವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು

ಡಿ ಬಾಸ್ ಐರಾವತ ಬೆಡಗಿಗೆ ಭಾರಿ ಬೇಡಿಕೆ..!!

ಐಸಿಸ್ ಅಡಗುತಾಣದ ಮೇಲೆ ದಾಳಿ ಮಾಡಿದ ಅಮೆರಿಕ ಸೇನೆ: ಹತ್ಯೆಯಾದ10 ಉಗ್ರರು

ಗಣಿತ ಶಾಸ್ತ್ರಜ್ಞ ಹಾಗೂ ಸೂಪರ್​ 30 ಆನಂದ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ

- Advertisement -

Latest Posts

Don't Miss