ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿರುವ ಮನಕಲುಕುವ ಘಟನೆ ನಡೆದಿದೆಹರಿಣಿ ಎನ್ನುವ ಬೊಮ್ಮನಕೆರೆ ಗ್ರಾಮದ ಯುವತಿ ವಿವಿಧ ಸ್ವಸಹಾಯ ಗುಂಪುಗಳಿಂದ ಸಾಲ ಪಡೆದುಕೊಂಡು ನಂತರ ಎಲ್ಲವನ್ನು ಬಳೆಸಿಕೊಂಡು ಸಾಲ ತೀರಿಸಲಾಗದೆ ಮನೆಯಿಂದ ಪರಾರಿಯಾಗಿದ್ದಾಳೆ
ಸಾಲ ತೀರಿಸುವಂತೆ ಪ್ರತಿದಿನ ಸಾಲಗಾರರು ಮನೆಗೆ ಬಂದು ತಾಯಿ ಹೊನ್ನಮ್ಮನ ಮೇಲೆ ಒತ್ತಡವನ್ನು ಹೇರಿದ್ದಾರೆ. ಸಾಲಗಾರರ ಕಿರಿಕುಳ ತಾಳಲಾರದೆ ಮನನೊಂದಂತಹ ತಾಯಿ ಕಳೆದ ಮೂರು ದಿನಗಳಿಂದ ಊಟ ಮಾಡದೆ ನೀರನ್ನು ಸೇವಿಸದೆ ಅಸ್ವಸ್ಥಳಾಗಿ ಹಸುನೀಗಿದ್ದಾಳೆ.
ಈಗ ತಾಯಿಯ ಶವವನ್ನು ಮನೆಯ ,ಮುಂದೆ ಇಟ್ಟುಕೊಂಡು ಕುಳಿತಿರುವ ಅಣ್ಣ ತಂಗಿಗೆ ಬರುವಿಕಿಗಾಗಿ ಕಾಯುತಿದ್ದಾನೆ. ಇಲ್ಲಿದ್ದರೂ ಒಂದು ಬಾರಿ ಬಂದು ತಾಯಿಯ ಮುಖವನ್ನು ನೋಡು ಎಂದು ಮನವಿ ಮಾಡಿಕೊಂಡಿದ್ದಾನೆ ಗ್ರಾಮಸ್ಥರು ಸಹ ಹರಿಣಿಯ ಸಂಪರ್ಕಕ್ಕೆ ಪ್ರಯತ್ನ ಮಾಡುತಿದ್ದಾರೆ.
Rashmika Mandanna : ಕಿರಿಕ್ ಬೆಡಗಿಗೆ ಶುರುವಾಯ್ತು ಕನ್ನಡ ಪ್ರೇಮ…?!