Sunday, September 8, 2024

Latest Posts

Annabhagya: ನಮ್ಮ ನಾಡಿನ ಜನ ಹಸಿವಿನಿಂದ ಮಲಗಬಾರದು: ಸಿಎಂ..!

- Advertisement -

ರಾಜ್ಯ ಸುದ್ದಿ :ಕರ್ನಾಟಕವನ್ನು ಹಸಿವು ಮುಕ್ತ ಕರ್ನಾಟಕ ಮಾಡಬೇಕು ರಾಜ್ಯದಲ್ಲಿರುವ ಯಾರು ಸಹ ಹಸಿವಿನಿಂದ ಇರಬಾರದು ಇರಬಾರದು ಎನ್ನುವ ದೃಷ್ಟಿಯಿಂದ ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯವನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪಡಿತರ ಅಕ್ಕಿಯನ್ನು ನೀಡುತ್ತಿದೆ .ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಟ್ವಿಟರ್ ನಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನಮ್ಮ ನಾಡಿನಲ್ಲಿ ಯಾರೂ ಕೂಡ ಹಸಿವಿನಿಂದ ಮಲಗಬಾರದು. ರಾಜ್ಯವನ್ನು ಹಸಿವುಮುಕ್ತವಾಗಿಸಬೇಕು ಎಂಬ ನಿಚ್ಚಳ ಗುರಿಯನ್ನು ಹೊಂದಿರುವ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಕುಟುಂಬದ ಎಲ್ಲ ಸದಸ್ಯರಿಗೂ ಅಗತ್ಯ ಪ್ರಮಾಣದ ಅಕ್ಕಿಯನ್ನು ಪೂರೈಸುತ್ತಿದ್ದೇವೆ.

ಇದರಿಂದ ಕೌಟುಂಬಿಕ ಖರ್ಚಿನ ಹೊರೆ ಇಳಿಕೆಯಾಗಿದೆ. ಬಡತನ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಮೀರಿ ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗುತ್ತಿದೆ.

- Advertisement -

Latest Posts

Don't Miss