Thursday, June 19, 2025

Latest Posts

AnnaBhagya- ಅನ್ನಭಾಗ್ಯ ನೇರ ನಗದು ಫಲಾನುಭವಿಗಳ ಸಮಾವೇಶ

- Advertisement -

ಕೋಲಾರ : ಜಿಲ್ಲೆಯ ಮಾಲೂರಿನ ಜ್ಯೂನಿಯರ್ ಕಾಲೇಜು‌ ಬಳಿ  ನೇರ ನಗದು  ಸಮಾವೇಶ ಹಮ್ಮಿಕೊಳ್ಳಲಾಗಿದ್ದು ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ, ನೀಡಿದರು. ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಸಂಸದ ಮುನಿಸ್ವಾಮಿ, ಮಾಲೂರು ಶಾಸಕ ಕೆ.ವೈ ನಂಜೇಗೌಡ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದರು

ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ ಕೇಂದ್ರ ಸರ್ಕಾರದವರು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಆದರೆ ನಾವು 10 ಕೆಜಿ ಕೊಡುವುದಕ್ಕೆ ಆಗಲಿಲ್ಲ ನಮಗೆ ಅಕ್ಕಿ ಕೊಡಲು ಕೇಂದ್ರದ ಬಿಜೆಪಿಯವರಿಗೆ ಮನಸ್ಸಿಲ್ಲ ಈ ವಿಚಾರವಾಗಿ ನಾನು ಎರಡು ಬಾರಿ ದೆಹಲಿಗೆ ಹೋಗಿದ್ದೆ 1 ಕೆಜಿಗೆ 34 ರೂಪಾಯಿ ಹಣ ಕೊಡುತ್ತೇವೆ ಅಕ್ಕಿ ಕೊಡಿ ನಾನು ಅವರ ಜೊತೆ ಅರ್ಧ ಗಂಟೆ ವಾದ ಮಾಡಿದೆ

ನೀವು ಬುದ್ಧಿವಂತ ಮಂತ್ರಿ ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ ಅಂದೆಸ್ಟಾಕ್ ಇರುವ ಅಕ್ಕಿಯನ್ನು ಕೊಡಿ ಎಂದರೂ ನಮಗೆ ಕೊಟ್ಟಿಲ್ಲ ಕೇಂದ್ರ ಸರ್ಕಾರ ತಾಯಿಯ ಸ್ಥಾನದಲ್ಲಿ ಇರುತ್ತೆ ನಾವು ಕೇಂದ್ರ ಸರ್ಕಾರದಲ್ಲಿ ಇದ್ದಾಗ ತಾರತಮ್ಯ ಮಾಡುತ್ತಿರಲಿಲ್ಲ ಕೊನೆಯ ಕ್ಷಣದಲ್ಲಿ ಯಾಕೆ ಈ ತೀರ್ಮಾನ ತೆಗೆದುಕೊಂಡರೊ ಗೊತ್ತಿಲ್ಲ.

ನಾವು ಮಾತು ಕೊಟ್ಟ ಕಾರಣ ಅಕ್ಕಿ ಬದಲು ಹಣ ಕೊಟ್ಟಿದ್ದೇವೆ ಹಣ ನೀಡುವ ಮೂಲಕ ನಾವು ನುಡಿದಂತೆ ನಡೆದುಕೊಂಡಿದ್ದೇವೆ ಆದಷ್ಟು ಬೇಗ ಅಕ್ಕಿಯನ್ನು ಕೊಡುವ ಕೆಲಸ ಮಾಡುತ್ತೇವೆ 1.29 ಲಕ್ಷ ಕುಟುಂಬಗಳಿಗೆ ಅಕ್ಕಿ ಬದಲು ಹಣ ಹಾಕುತ್ತಿದ್ದೇವೆ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಭೂಮಿ ಕೋಲಾರ ಹಾಗಾಗಿ ಮೊದಲಿಗೆ ಕೋಲಾರ ಮತ್ತು ಮೈಸೂರು ಜಿಲ್ಲೆಗಳಿಗೆ ಅಕ್ಕಿ ಬದಲು ಹಣ ಹಾಕಿದ್ದೇವೆ

ಇಲ್ಲಿಯವರೆಗೂ ಮೂರು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಗೃಹಲಕ್ಷ್ಮೀ ಯೋಜನೆಯೂ ಆಗಸ್ಟ್ 16 ರಂದು ಜಾರಿಗೆ ತರುತ್ತೇವೆ ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ ಯುವನಿಧಿ ಯೋಜನೆಯನ್ನೂ ಜಾರಿಗೆ ತರುತ್ತೇವೆ ನಾವು ರೈತರ ಸಾಲ ಮನ್ನಾ ಮಾಡಿದ್ವಿ ಆದ್ರೆ ಬಿಜೆಪಿಯವರು ರೈತರ ಸಾಲ ಮನ್ನಾ ಮಾಡಲಿಲ್ಲ ಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿದ್ರೆ ಅವರು ಉತ್ಪಾದನೆ ಹೆಚ್ಚು ಮಾಡ್ತಾರೆ ಕಷ್ಟದಲ್ಲಿರುವ ರೈತರಿಗೆ ನಾವು ಬೆನ್ನೆಲುಬಾಗಿ ನಿಲ್ಲಬೇಕು. ಕೇಂದ್ರ ಸರ್ಕಾರ ಉದ್ಯಮಿಗಳ 15 ಲಕ್ಷ ಕೋಟಿಯನ್ನು ಸಾಲ ಮನ್ನಾ ಮಾಡಿದ್ದಾರೆ. ಆದ್ರೆ ರೈತರ 8 ಲಕ್ಷ ಕೋಟಿ ಸಾಲ ಮನ್ನಾ ಮಾಡಲಿಲ್ಲ ಎಂದರು  ಕೆ.ಹೆಚ್ ಮುನಿಯಪ್ಪ.

ಈ ವೇಳೆ ನಿಮ್ಮ ಸರ್ಕಾರ ಮನ್ನಾ ಮಾಡಿದೆಯಾ ಎಂದು ಸಂಸದ ಎಸ್ ಮುನಿಸ್ವಾಮಿ ಮಾಡಿದ ಪ್ರಶ್ನೆಗೆ ಕೆಹೆಚ್ ಮುನಿಯಪ್ಪ ಮಾತಿಗೆ ಅಡ್ಡಿಪಡಿಸಿದ ಬಿಜೆಪಿ ಸಂಸದ ಮುನಿಸ್ವಾಮಿ ಇದು ಸರ್ಕಾರಿ ಕಾರ್ಯಕ್ರಮ ರಾಜಕೀಯ ಮಾತನಾಡಬೇಡಿ ಎಂದ ಸಂಸದ ಈ ವೇಳೆ ಸಂಸದರ ವಿರುದ್ಧ ತಿರುಗಿಬಿದ್ದ ಸಾರ್ವಜನಿಕರು ಕೆಲಕಾಲ ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಸೃಷ್ಟಿ ಮಾಡಿದ್ದರುಈಗ ಯಾರೂ ಮಾತನಾಡಬೇಡಿ ಇದು ಸಮಯವಲ್ಲ ಎಂದು ಸಾರ್ವಜನರಿಕರಿಗೆ ಕೆಹೆಚ್ ಮುನಿಯಪ್ಪ ಮನವಿ ಮಾಡಿದರು

- Advertisement -

Latest Posts

Don't Miss