Banglore News:
ಮಳೆ ಅನಾಹುತ ಪ್ರದೇಶ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಿದ ಶಾಸಕ ಅರವಿಂದ ಲಿಂಬಾವಳಿ ಇದ್ದಕ್ಕಿದ್ದಂತೆ ಮಹಿಳೆ ಮೇಲೆ ಗುಡುಗಿದ್ದಾರೆ. ಅಧಿಕಾರಿಗಳ ಜೊತೆ ಕೆರೆ ಕೋಡಿ ವೀಕ್ಷಣೆ ಮಾಡಲು ಬಂದಂತಹ ಲಿಂಮಬಾವಲಿಗೆ ಮಹಿಳೆಯೊಬ್ಬರು ತನ್ನ ಮನೆಯ ದಾಖಲೆ ಪತ್ರ ನೀಡಲು ಬಂದಿದ್ದಾರೆ ಈ ಸಂದರ್ಭ ಲಿಂಬಾವಲಿ ಮಹಿಳೆಯ ಮೇಲೆ ಸಿಕ್ಕಾಪಟ್ಟೆ ಎಗೆರಾಡಿದ್ದಾರೆ. ರಾಜಕಾಲುವೆ ಮಾಡಿಕೊಂಡಿದ್ದೀಯಾ ,ಇಲ್ಲಿ ಬಂದು ಮಾತನಾಡುತ್ತೀಯಾ ಎಂದು ಲಿಂಬಾವಳಿ ಗದರಿದ್ದಾರೆ. ನಾಚಿಕೆ ಆಗಲ್ವಾ ನಿನಗೆ ಎಂದು ಮಹಿಳೆಗೆ ಆವಾಜ್ ಹಾಕಿದ್ದಾರೆ. ಒತ್ತುವರಿ ಮಾಡಿರುವ ನಿಂಗೆ ಮರ್ಯಾದೆ ಬೇರೆ ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ತದನಂತರ ಆಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯನ್ನು ಸ್ಟೇಷನ್ ನಲ್ಲಿ ಕೂರಿಸಿ ಎಂಬುವುದಾಗಿ ರೇಗಾಡಿದ್ದಾರೆ. ಲಿಂಬಾವಳಿಯ ಈ ವರ್ತನೆಗೆ ಎಲ್ಲರೂ ಶಾಕ್ ಆಗಿದ್ದಾರೆ.
“ಮತ್ತದೇ ಹಳೇ ಕ್ಯಾಸೆಟ್, ಆತ್ಮವಂಚನೆಯ ಮಾತುಗಳು”: ಮೋದಿ ಭಾಷಣಕ್ಕೆ ಕಾಂಗ್ರೆಸ್ ಲೇವಡಿ
ಸಿಆರ್ ಝೆಡ್ ಮಾಸ್ಟರ್ ಪ್ಲಾನ್ ಅನುಮೋದನೆ: ಕರಾವಳಿಯ ಆರ್ಥಿಕತೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕ – CM ಬೊಮ್ಮಾಯಿ