ಧಾರವಾಡ: ಆಸ್ಟ್ರೇಲಿಯಾದಿಂದ ಬಂದು ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಧಾರವಾಡದ ಮಹಿಳೆ ಬರೆದಿಟ್ಟಿದ್ದ ಡೆತ್ ನೋಟ್ ಇದರಲ್ಲಿ ತಾನು ಅನುಭವಿಸಿದ್ದ ನೋವನ್ನು ವಿವರವಾಗಿ ಬರೆದಿದ್ದಾರೆ. ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ಟೀಸ್ಟ್ ಸಿಕ್ಕಿದೆ. ಡೆತ್ನೋಟ್ನಲ್ಲಿ ತಮ್ಮ ನೋವುನ್ನು ತೋಡಿಕೊಂಡಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಗಸ್ಟ್ 20 ರಂದು ನವಿಲುತೀರ್ಥ ಜಲಾಶಯದ ಬಳಿ ಪ್ರಿಯದರ್ಶಿನಿ ಶವ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಗುರುತು ಪತ್ತೆಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.
ಆಗಸ್ಟ್ 19 ರಂದು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಿಯದರ್ಶಿನಿ, ಅಂದು ರಾತ್ರಿ ಬಸ್ ಮೂಲಕ ಹುಬ್ಬಳ್ಳಿಗೆ ಬಂದಿದ್ದರು. ಬಳಿಕ ಅಲ್ಲಿನ ಕೋರಿಯರ್ ಕಚೇರಿಯೊಂದಕ್ಕೆ ತೆರಳಿ ಎಲ್ಲ ಬ್ಯಾಗ್, ಚಿನ್ನಾಭರಣ, ಮೊಬೈಲ್ ಗಳನ್ನು ನೀಡಿ, ತನ್ನ ತಂದೆಗೆ ಕೋರಿಯರ್ ಮಾಡುವಂತೆ ಹೇಳಿದ್ದರು. ಬಳಿಕ ಸಂಜೆ 5 ಗಂಟೆಯವರೆಗೆ ತಮ್ಮನ್ನು ಸಂಪರ್ಕಿಸದಿರಲು ಹೇಳಿ, ಅಲ್ಲಿಂದ ಗೋಕಾಕ್ ಕಡೆ ಹೊರಟಿದ್ದೇನೆಂದು ಬಸ್ ಹತ್ತಿದ್ದರು.
ನಂತರ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನದಿಯನ್ನು ನೋಡಿ, ಅಲ್ಲಿಯೇ ಇಳಿದಿದ್ದರಾದರೂ ಅಲ್ಲಿ ಜನರಿದ್ದ ಕಾರಣ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಹಾಗೆಯೇ ನದಿಗುಂಟ ನಡೆದು ಬಂದು ಗೊರವನಕೊಳ್ಳ ಗ್ರಾಮದ ಬಳಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಸಿಕ್ಕಿತ್ತು. ಇದೇ ವೇಳೆ ಅವರು ಇಂಗ್ಲೀಷ್ ನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣವನ್ನು ತಿಳಿಸಿದ್ದಾರೆ.
ಡೆತ್ ನೋಟ್ ನಲ್ಲಿ ಏನಿದೆ ಗೋತ್ತಾ ?
ಪ್ರೀತಿಯ ಅಪ್ಪಾಜಿ, ‘ನಾವು ಇದೀಗ ಜೀವ ಬೆದರಿಕೆಯ ಪರಿಸ್ಥಿತಿಯಲ್ಲಿದ್ದೇವೆ. ನನ್ನ ಮಕ್ಕಳ ಮತ್ತು ಪತಿ ಲಿಂಗರಾಜ್ ಉಳಿವಿಗಾಗಿ ನಾನು ಸಾಯಬೇಕಾಗಿದೆ. ನನ್ನ ಬಗ್ಗೆ ನೀವು ಹೆಚ್ಚು ಚಿಂತಿಸಬೇಡಿ. ನನ್ನ ಕುಟುಂಬ ಮತ್ತು ಮಕ್ಕಳ ಒಳ್ಳೆಯದಕ್ಕಾಗಿ ಈ ಸಾವನ್ನು ನಾನು ಸ್ವೀಕರಿಸುತ್ತೇನೆ. ನಾನು ಮಾಡುತ್ತಿರೋದು ಒಳ್ಳೆಯ ಕಾರ್ಯವೆಂದು ಸ್ವೀಕರಿಸಿದ್ದೇನೆ. 2021 ರಿಂದ ಇಲ್ಲಿಯವರೆಗೂ DCJ ನಮ್ಮ ಕುಟುಂಬವನ್ನು ಹಾಳು ಮಾಡಿದ್ದಾರೆ. ವೆರ್ಲಿ ಸ್ಟ್ರೀಟ್ ಸಿಡ್ನಿ ನಿವಾಸಿಗಳು ನಮಗೆ ತೊಂದರೆ ಕೊಟ್ಟಿದ್ದಾರೆ. ಶ್ರೀ ಆನಂದ್ ಗೋರು, ಅಜಿತ ಗೋರು, ಶ್ರೀನಿಧಿ ಗೋರು, ಶ್ರೀ ಜಬ್ಬೂರ್ ಮತ್ತು ಕುಟುಂಬ, ಡೇನಿಯಲ್ ಮತ್ತು ಕುಟುಂಬ, ರೇಮಂಡ್ ಮತ್ತು ಅವನ ಮಕ್ಕಳು, ತಾನ್ಯಾ ಮತ್ತು ಇಡೀ ಕುಟುಂಬ, ಪೊಲೀಸ್ ಅಧಿಕಾರಿ ಮತ್ತು ಕುಟುಂಬದವರು ನಮಗೆ ತೊಂದರೆ ಕೊಟ್ಟಿದ್ದಾರೆ. ಎ, ಬಿ + #17+ #19+ #22 ಕುಟುಂಬದವರೆಲ್ಲರೂ ನನ್ನ ಸಾವಿಗೆ ಕಾರಣರಾಗಿದ್ದಾರೆ. ನಮ್ಮ ಮನೆಗೆ ಪೂರೈಕೆಯಾಗೋ ನೀರಿನಲ್ಲಿ ವಿಷ ಬೆರೆಸಲಾಗಿತ್ತು. ಇದರಿಂದಾಗಿ ನಮ್ಮ ಆರೋಗ್ಯದಲ್ಲಿ ಸಮಸ್ಯೆಯುಂಟಾಯಿತು ಎಂದು ಪ್ರಿಯದರ್ಶಿನಿ ಪಾಟೀಲ್ ಅಳಲನ್ನು ತೋಡಿಕೊಂಡಿದ್ದಾರೆ.
ಬಾಡಿಗೆ ಪಡೆದ ಟ್ರ್ಯಾಕ್ಟರ್ಗಳನ್ನು ಒತ್ತೆ ಇಟ್ಟು ವಂಚಿಸಿದ ಆರೋಪಿ ನಂದೀಶ್ ಬಂಧನ
ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಅಚಾನಕ್ ಆಗಿ ಸಾವು: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ..
ಮಳೆ ಬಾರದೇ ಬಿರುಕು ಬಿಟ್ಟ ಭೂಮಿ, ಕಂಗಾಲಾದ ರೈತ: ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ..