Tuesday, June 16, 2026

Karnataka Tv

ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯ ಬೆಳೆಯಬೇಕು – CM ಬಸವರಾಜ ಬೊಮ್ಮಾಯಿ

ಪುಣೆ: ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಪುಣೆಯಲ್ಲಿ ಬಂಟರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಭವನದ ನಾಲ್ಕನೇ ವಾರ್ಷಿಕೋತ್ಸವವ ಹಾಗೂ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಬಿ ಶೆಟ್ಟಿ ಅವರ ಸಮಾಜ ಕಲ್ಯಾಣ...

ನಾಗರ ಹಾವಿನಿಂದ ಮಗುವನ್ನು ರಕ್ಷಿಸಿದ ತಾಯಿ:ಮಂಡ್ಯದಲ್ಲಿ ಘಟನೆ

ಮಂಡ್ಯದಲ್ಲಿ ತಾಯಿಯೊಬ್ಬಳು ಮಗುವನ್ನು ನಾಗರ ಹಾವಿನಿಂದ ರಕ್ಷಿಸಿದ ಘಟನೆ ನಡೆದಿದೆ. ತಾಯಿ ಮಗು ಮನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ದುರ್ಘಟನೆಯಿಂದ ತಾಯಿ ಮಗು ಪಾರಾಗಿದ್ದಾರೆ. ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಮಗುವಿನ ಪಕ್ಕದಲ್ಲೇ  ನಾಗರ ಹಾವು ಇದ್ದದ್ದು ಕಂಡುಬಂದಿದೆ. ಅದೃಷ್ಟವಶಾತ್ ಎಂಬಂತೆ ತಾಯಿಯು ಮಗುವನ್ನು ತನ್ನ ಕಡೆ ಎಳೆದೊಯ್ದು ಮಗುವನ್ನು ನಾಗರ ಹಾವಿನಿಂದ ರಕ್ಷಿಸಿದ್ದಾಳೆ. ಕ್ಷಣಾರ್ಧದಲ್ಲಿ ದೊಡ್ಡ ಅಚಾತುರ್ಯ...

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತಿರಂಗಾ – ಧ್ವಜ ಹಾರಿಸಲು ನಡೆಸಿದ ಹೋರಾಟ ಸ್ಮರಿಸಿದ ಜೋಶಿ

ಆಜಾದೀ ಕಾ ಅಮೃತ್ ಮಹೋತ್ಸವದ ಈ ಸಂದರ್ಭದಲ್ಲಿ ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇಂದು ರಾಷ್ಟ್ರಧ್ವಜ ಹಾರಾಟ ವಿಶೇಷವಾಗಿತ್ತು. ರಾಷ್ಟ್ರಧ್ವಜ ಹಾರಿಸುವ ವಿಚಾರ ಬಂದಾಗ ಹುಬ್ಬಳ್ಳಿ ಈದ್ಗಾ ಮೈದಾನ ಹಿಂದಿರುವ ರಣ ರೋಚಕ ಇತಿಹಾಸ ಮರೆಯಲು ಸಾಧ್ಯವೇ.? ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟ್ರಧ್ವಜ ಹಾರಿಸಲು ಮುವತ್ತು ವರ್ಷಗಳ ಹಿಂದೆ  ಹುಬ್ಬಳ್ಳಿ ಈದ್ಗಾ...

ಮಾಜಿ ಎಂಎಲ್ಸಿ ಮರಿಲಿಂಗೇಗೌಡ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ

ರಾಮನಗರ: ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿಲಿಂಗೇಗೌಡ ಮತ್ತು ಇನ್ನೂ ಹಲವರು ಶನಿವಾರ ಜೆಡಿಎಸ್ ಗೆ ವಿದಾಯ ಹೇಳಿ, ಬಿಜೆಪಿ ಸೇರಿಕೊಂಡರು. ಇಲ್ಲಿಗೆ ಸಮೀಪವಿರುವ ಹನುಮಂತನಗರದ ಮನೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಇವರನ್ನೆಲ್ಲ, ಪಕ್ಷದ ಕೇಸರಿ ಅಂಗವಸ್ತ್ರವನ್ನು ಹಾಕುವ ಮೂಲಕ ಬಿಜೆಪಿಗೆ...

ಶಾಸಕನಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ವಿಜಯಪುರ: ದೇಶವೇ ಅಮೃತ ಮಹೋತ್ಸವದ ಸಂಭ್ರಮದಲ್ಲಿರಬೇಕಾದರೆ ವಿಜಯಪುರದಲ್ಲಿ ಶಾಸಕನಒಬ್ಬ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ.ಶಾಸಕನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹರ್ ಘರ್ ತಿರಂಗಾ ರ್ಯಾಲಿಯಲ್ಲಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಆನೆ‌ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಅದರ‌ ಮೇಲೆ ಅವರ ಮಗನನ್ನು ಕೂಡಿಸಿ ಅಪಮಾನ...

ತಾಲಿಬಾನ್ ನಲ್ಲಿ ವಿಧ್ಯಾರ್ಥಿಗಳಿಂದ ಪ್ರತಿಭಟನೆ: ನಾಗರಿಕ ಮೇಲೆ ಗುಂಡಿನ ದಾಳಿ

ತಾಲಿಬಾನ್ ನಲ್ಲಿ ಶಿಕ್ಷಣಕ್ಕಾಗಿ ಮಹಿಳೆಯರಿಂದ ಪ್ರತಿಭಟನೆ.ತಾಲಿಬಾನ್ ಸರಕಾರದ ಏಕಸ್ವಾಮ್ಯತ್ವ ಧೋರಣೆಯನ್ನು ಖಂಡಿಸಿ ಇದೀಗ ಉಗ್ರ ಹೋರಾಟ ನಡೆಯುತ್ತಿದೆ.ಕಾಬೋಲ್ ನಲ್ಲಿ ತೀವ್ರ ತರವಾದ ಹೋರಾಟ ನಡೆಯುತ್ತಿದೆ. ಪ್ರತಿಭಟನಾ ಕಾರರ ವಿರುದ್ಧ ತಾಲಿಬಾನ್ ಸರಕಾರ ಗುಂಡಿನ ದಾಳಿಯನ್ನೇ ನಡೆಸಿದೆ. ಮಹಿಳೆಯರು ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿದು ಕಾಬೊಲ್ ನ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ...

ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನ: ತ್ರಿವರ್ಣ ಧ್ವಜ ಹೊದ್ದಿದ್ದ ಆನೆಯ ಮೇಲೆ ಪುತ್ರನ ಸವಾರಿ

ವಿಜಯಪುರ: ಶಾಸಕನಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವಂತ ಘಟನೆ, ಜಿಲ್ಲೆಯ ತಾಳಿಕೋಟೆಯಲ್ಲಿ ಇಂದು ನಡೆದಿದೆ. ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿಯಿಂದಲೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಹೀಗಾಗಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿದೆ. ಅಂದಹಾಗೇ, ಇಂದು ತಾಳಿಕೋಟೆಯಲ್ಲಿ ನಡೆದಂತ ಹರ್ ಘರ್ ತಿರಂಗಾ ರ‌್ಯಾಲಿಯಲ್ಲಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ...

ಬಿಎಸ್ ಯಡಿಯೂರಪ್ಪಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ

ಮಂಡ್ಯದ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ನಡೆದ 6ನೇ ವರ್ಷದ ಮಹಾರಥೋತ್ಸವ ಸಮಾರಂಭದಲ್ಲಿಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪರವರಿಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮರಿದೇವರು ಶಿವಯೋಗಿ ಶ್ರೀ ಸ್ಮರಣೆಯಲ್ಲಿ ದುರ್ದಂಡೇಶ್ವರ ಮಹಂತ ಶಿವಯೋಗಿ ಮಠದ ವತಿಯಿಂದ ಪ್ರದಾನ ಮಾಡಲಾಯಿತು. ಶ್ರೀಗಳ 14ನೇ ವರ್ಷದ ಪುಣ್ಯ ಸ್ಮರಣೆ, 6ನೇ ವರ್ಷದ ಮಹಾರಥೋತ್ಸವ...

ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್ ಕಂಟಕ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೂನ್ ನಲ್ಲಷ್ಟೇ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಕೆ ಕಂಡಿದ್ದರು.ಆದರೆ ಇದೀಗ ಮತ್ತೆ ಕೋವಿಡ್ ಸೋಂಕು ಸೋನಿಯಾ ಗಾಂಧಿಗೆ ತಗುಲಿವೆ. ಶ್ವಾಸಕೋಶ ಅನ್ನನಾಳಕ್ಕೆ ಸೋಂಕು ತಗುಲಿದ್ದು. ಐಸೋಲೇಶನ್ ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಸೋನಿಯಾ ಗಾಂಧಿ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು....

ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಕೇಸ್ ಪತ್ತೆ, ನೈಜೀರಿಯಾಗೆ ಪ್ರಯಾಣ ಇತಿಹಾಸ ಹೊಂದಿರುವ ಆಫ್ರಿಕನ್ ಮಹಿಳೆಗೆ ಪಾಸಿಟಿವ್

ನವದೆಹಲಿ: ನೈಜೀರಿಯಾಕ್ಕೆ ಪ್ರಯಾಣಿಸಿದ ಇತಿಹಾಸ ಹೊಂದಿರುವ 22 ವರ್ಷದ ಆಫ್ರಿಕನ್ ಮಹಿಳೆಗೆ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ರಾಷ್ಟ್ರ ರಾಜಧಾನಿ ಶನಿವಾರ ತನ್ನ ಐದನೇ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ 31 ವರ್ಷದ ನೈಜೀರಿಯಾದ ಮಹಿಳೆಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇದು...

About Me

32340 POSTS
0 COMMENTS
- Advertisement -spot_img

Latest News

ಬಾದಾಮಿ ಹಾಲು ಕುಡಿಯುತ್ತ ಹಳೆಯ ನೆನಪು ಮೆಲುಕು ಹಾಕಿದ ಗೃಹಸಚಿವ ಜಿ.ಪರಮೇಶ್ವರ್: Video

Tumakuru News: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತುಮಕೂರಿನಿಂದ ಕಾರ್ಯಕ್ರಮ ಮುಗಿಸಿ, ಬೆಂಗಳೂರಿಗೆ ಬರುತ್ತಿದ್ದಾಗ, ಚಹಾ ಅಂಗಡಿಯಲ್ಲಿ ಸ್ವಲ್ಪ ಸಮಯ ಕಳೆದರು. ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಉಪಮುಖ್ಯಮಂತ್ರಿಯವರು, ನಿನ್ನೆ...
- Advertisement -spot_img