Political News:
ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಪಂಚರತ್ನ ರಥ ಯಾತ್ರೆಯ ಭಾಗವಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದಲ್ಲಿ ಎಚ್ಡಿಕೆ ಮಾಡನಾಡಿದರು. ಧೂಳಿನ ಸಮಸ್ಯೆಯಿಂದ ಧ್ವನಿ ಹಾಳಾಗಿದೆ, ಇಲ್ಲಿನ ಧೂಳಿನಿಂದಲೇ ಈ ಕೆಮ್ಮು ಬಂದಿದೆ. ಇಲ್ಲಿನ ಜನ ಇಷ್ಟು ವರ್ಷಗಳಿಂದ ಇಂತಹ ಸಮಸ್ಯೆಗಳನ್ನು ಸಹಿಸಿಕೊಂಡು ಬದುಕಿದ್ದೀರಿ. ನನಗೆ ಎರಡು ದಿನ ಸಹಿಸಿಕೊಳ್ಳಲು ಆಗಲಿಲ್ಲ. ನಿಮ್ಮನ್ನ ಆ ದೇವರೇ ಕಾಪಾಡಬೇಕು ಎಂದರು.ಪಂಚರತ್ನ ರಥಯಾತ್ರೆ ಭಾಗವಾಗಿ ನಾನು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ತಿರುಗಾಡಿದ್ದೇನೆ. ಇಲ್ಲಿನ ಜನರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ನಾನು ಕಂಡಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಷ್ಟೆ ಸುಮಾರಾಗಿವೆ. ಆದರೆ ಹಳ್ಳಿಗಳಲ್ಲಿ ರಸ್ತೆಗಳಲ್ಲಿ ಅತ್ಯಂತ ಕಳಪೆಯಾಗಿವೆ. ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಇದಕ್ಕಾಗಿ ಬಿಡುಗಡೆಯಾಗುವ ದುಡ್ಡು ಎಲ್ಲಿ ಹೋಗುತ್ತಿದೆಯೋ, ಯಾರ ಜೇಬಿಗೆ ಸೇರುತ್ತಿದೆಯೋ ಎನೋ ಎಂದು ಪ್ರಶ್ನಿಸಿದರು.