ಬಿಬಿಸಿ ಮೇಲೆ ಐಟಿ ದಾಳಿ ಸಂಪಾದಕರಿಗೆ ಆತಂಕ…!

National News:

Feb:15: ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ದೆಹಲಿ, ಮುಂಬೈ ಮತ್ತು ಇತರ ಕೆಲವು ಸ್ಥಳಗಳಲ್ಲಿನ ಬಿಬಿಸಿ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಇದರ ಕಾರಣ ಈಗ ಬಹಿರಂಗವಾಗಿದೆ.ಮೂಲಗಳ ಪ್ರಕಾರ, ಐಟಿ ಇಲಾಖೆಯು ದೆಹಲಿ, ಮುಂಬೈನ ಬಿಬಿಸಿ ಕಚೇರಿಗಳಲ್ಲಿ ಅಂತಾರಾಷ್ಟ್ರೀಯ ತೆರಿಗೆ ಮತ್ತು ಹಣ ರ‍್ಗಾವಣೆಯಲ್ಲಿ ಅಕ್ರಮಗಳ ಆರೋಪದ ಮೇಲೆ ಈ ಶೋಧ ಕಾರ್ಯ  ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಬಿಬಿಸಿ ಒಳಗೊಂಡಿರುವ ಅಂತಾರಾಷ್ಟ್ರೀಯ ತೆರಿಗೆ ಮತ್ತು ಹಣ ವರ್ಗಾವಣೆ ಆಪಾದನೆಗೆ ಸಂಬಂಧ ಈ ಶೋಧ ಕಾರ್ಯ ನಡೆಸಲಾಗಿದೆ. ಮೂಲಗಳ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು 2012 ರ ಹಿಂದಿನ ಖಾತೆಯ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿದ್ದಾರೆ ಮತ್ತು ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಬಿಬಿಸಿ ಟ್ವೀಟ್ ಮಾಡಿದೆ.

ರೈಲ್ವೆಯಲ್ಲಿ ಸಿಗಲಿದೆ ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ

ಟರ್ಕಿ ಭೂಕಂಪನ; 20 ಸಾವಿರಕ್ಕೂ ಅಧಿಕ ಮಂದಿ ಬಲಿ?

ಕಣ್ಣೀರು ಹಾಕಿದ ಪಿ.ಟಿ.ಉಷಾ..?! ಕಾರಣ ಕೇಳಿದ್ರೆ ನಿಮ್ಮ ಕಣ್ಣು ಒದ್ದೆಯಾಗುತ್ತೆ..!

 

About The Author