Thursday, October 17, 2024

Latest Posts

ಸರ್ಕಾರದ ನಡೆಯ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತಿರುವ ವಕೀಲರ ನಿರ್ಧಾರಕ್ಕೆ ಬೆಲ್ಲದ್ ಬೆಂಬಲ

- Advertisement -

Dharwad News: ಧಾರವಾಡ: ಹಳೇ ಹುಬ್ಬಳ್ಳಿ ಪ್ರಕರಣ ವಾಪಸ್‌ಗೆ ಸರ್ಕಾರ ನಿರ್ಧಾರ ಮಾಡಿದ ಕಾರಣಕ್ಕೆ, ಸರ್ಕಾರದ ಕ್ರಮ ಪ್ರಶ್ನಿಸಿ, ಹೈಕೋರ್ಟ್‌ ಮೊರೆ ಹೋಗಲು, ವಕೀಲರು ನಿರ್ಧರಿಸಿದ್ದಾರೆ.

ಈ ಬಗ್ಗೆ ಧಾರವಾಡದಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದು,  ವಕೀಲರ ಸಂಘದಿಂದ ನಿರ್ಧಾರ ಮಾಡಿದ್ದಾರಂತೆ. ಸರ್ಕಾರದ ಕ್ರಮದ ವಿರುದ್ಧ ಕೋರ್ಟ್ ಹೋಗೋದಾಗಿ ಹೇಳಿದಾರೆ. ನಾನೂ ಸಹ ಮಾಧ್ಯಮಗಳಲ್ಲಿ ನೋಡಿದೆ. ಅದು ಸರಿಯಾದ ಕ್ರಮ. ಅದು ಮಾಡಬೇಕೆಂದು ನಾನು ಸಹ ಹೇಳುವೆ ಎಂದು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

- Advertisement -

Latest Posts

Don't Miss