Friday, July 11, 2025

Latest Posts

Bellary News: ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬಸ್: ಕರೆಂಟ್ ಇಲ್ಲದ ಕಾರಣ ಪ್ರಯಾಣಿಕರು ಸೇಫ್

- Advertisement -

Bellary News: ಬಳ್ಳಾರಿ: ಬಳ್ಳಾರಿಯಲ್ಲಿ ಬಸ್ ಅಪಘಾತವಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುರುಗೋಡಿನಿಂದ ಬಳ್ಳಾರಿಗೆ ಸಾಗಿದ್ದ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕುರುಗೋಡು ತಾಲೂಕು ಕೋಳುರು ಬಸ್ ಸ್ಟಾಪ್ ಬಳಿ ಈ ಘಟನೆ ನಡೆದಿದೆ.

ಕುರುಗೋಡು ಡಿಪೋಗೆ ಸೇರಿದ ಕೆಎ-34,ಎಫ್-2016 ಸರ್ಕಾರಿ ಬಸ್ ಕಂಬಕ್ಕೆ ಗುದ್ದಿದ್ದು, ಇದರ ಪರಿಣಾಮ ಕಂಬ ತುಂಡಾಗಿ 3 ಕಂಬ ಬಸ್ ಮೇಲೆ ಬಿದ್ದಿದೆ. ಕರೆಂಟ್ ಇಲ್ಲದ ಕಾರಣ ಪ್ರಯಾಣಿಕರು ಸೇಫ್ ಆಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Latest Posts

Don't Miss