ಈ ಕಾಲೇಜಿನಲ್ಲಿ ಇಂದು ಬಿಕಾಂ ಪರೀಕ್ಷೆ ರದ್ದು.. ಕಾರಣ ಏನು ಗೊತ್ತಾ..?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಡೆಯಬೇಕಿದ್ದ ಬಿ.ಕಾಂ ಪರೀಕ್ಷೆ ರದ್ದು.

ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನಲೆ ಬಿ.ಕಾಂ ಪರೀಕ್ಷೆ ರದ್ದಾಗಿದ್ದು ಪರೀಕ್ಷಾ ಕೇಂದ್ರದಿಂದ ವಿಧ್ಯಾರ್ಥಿಗಳನ್ನು ಹೊರಗೆ ಕಳುಹಿಸಿಲಾಗಿದೆ.

ಬಿಸಿಎ ಪದವಿ ಮ್ಯಾಥಮೆಟಿಕ್ಸ್ ಫೌಂಡೇಶನ್ ವಿಷಯ ಹಾಗೂ ಬಿ.ಕಾಂ ಪದವಿಯ ಪ್ರಿನ್ಸಿಪಾಲ್ ಆಫ್ ಮಾರ್ಕೆಟಿಂಗ್ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ‌.ಈ ಬಗ್ಗೆ ವಿಶ್ವವಿದ್ಯಾಲಯ ನೀಡಿದ ಸೂಚನೆ ಮೇರೆಗೆ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.

ಇಂದು ಬೆಳಗ್ಗೆ 10.30ಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ವಿಧ್ಯಾರ್ಥಿಗಳನ್ನು ಹೊರಗೆ ಕಳುಹಿಸಿಲಾಗಿದೆ.

ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ.

 

About The Author