Bigboss storry:
ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರು ಕೆಲ ವಿಚಾರಕ್ಕೆ ಈಗಲೂ ಟ್ರೋಲ್ ಆಗುತ್ತಿದ್ದಾರೆ. ಅವರು ಸಣ್ಣ ಮಕ್ಕಳಂತೆ ಆಡುತ್ತಾರೆ ಎಂಬುದು ಕೆಲವರು ಆರೋಪ. ಇನ್ನೂ ಕೆಲವರಿಂದ ಅವರಿಗೆ ಬೆಂಬಲ ಸಿಗುತ್ತಿದೆ. ಈಗ ಸೋನು ಅವರು ಮದುವೆ ವಿಚಾರ ಮಾತನಾಡಿದ್ದಾರೆ. ಮುಂದಿನ ಆರೇಳು ವರ್ಷ ಮದುವೆ ಆಗುವುದಿಲ್ಲ ಎಂಬುದನ್ನು ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರ ಕೇಳಿ ಸ್ಫೂರ್ತಿ ಗೌಡ ಅವರು ನಕ್ಕಿದ್ದಾರೆ.
ಬಿಗ್ ಬಾಸ್ ಒಟಿಟಿ’ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹಲವರ ಮಧ್ಯೆ ಟಾಸ್ಕ್ ವಿಚಾರಕ್ಕೆ ಕಿರಿಕ್ಗಳು ನಡೆಯುತ್ತಿವೆ. ಈಗಾಗಲೇ ಹಲವರು ಕಣ್ಣೀರು ಹಾಕಿದ್ದಾರೆ. ಈ ಬಾರಿ ಸೋನು ಶ್ರೀನಿವಾಸ್ ಗೌಡ ಹಾಗೂ ಸಾನ್ಯಾ ಅವರ ಸರದಿ. ಇಬ್ಬರ ನಡುವೆ ಟಾಸ್ಕ್ ವಿಚಾರಕ್ಕೆ ದೊಡ್ಡ ಕಿರಿಕ್ ಆಗಿದೆ. ‘ಲೂಸಾ ನೀನು?’ ಎಂದು ಸೋನು ಶ್ರೀನಿವಾಸ್ ಗೌಡ ವಿರುದ್ಧ ಸಾನ್ಯಾ ಅಯ್ಯರ್ ನೇರವಾಗಿ ಕೂಗಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಟೆಂಪರ್ ಕಳೆದುಕೊಂಡಿದ್ದಾರೆ.
ಈಗ ರೂಪೇಶ್ ಅವರನ್ನು ಕರುನಾಡ ವಾರಿಯರ್ಸ್ ತಂಡದಿಂದ ಹೊರಹಾಕಲಾಗಿದೆ. ಬದಲಾಗಿ ಈ ಸ್ಥಾನಕ್ಕೆ ಗುರೂಜಿ ಬಂದಿದ್ದಾರೆ. ಆರ್ಯವರ್ಧನ್ ಗುರೂಜಿಗೆ ಅದೃಷ್ಟ ಬಂದಿದ್ದು ಅವರು ತಂಡವನ್ನು ಸೇರಿಕೊಂಡಿದ್ದಾರೆ. ಇದನ್ನು ಸೋಮಣ್ಣ ಅವರೇ ಮನೆಯೊಳಗೆ ಎನೌನ್ಸ್ ಮಾಡಿದ್ದಾರೆ.ಸೋಮಣ್ಣ ಅವರನ್ನು ಸೂಚನೆಗಳನ್ನು ತಿಳಿಸಲು ಸೂಚಿಸಲಾಗಿದ್ದು ಅವರು ಇದನ್ನು ಎನೌನ್ಸ್ ಮಾಡಿದ್ದಾರೆ. ಸೋಮಣ್ಣ ಅವರ ನಿರ್ಧಾರಗಳನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಲು ಕೇಳಿಕೊಳ್ಳಲಾಗಿದ್ದು ಸೋಮಣ್ಣ ಅವರು ತಂಡದ ಕಾರಣಗಳೊಂದಿಗೆ ಕೈಬಿಡುತ್ತಿರುವ ಸದದ್ಯನ ಹೆಸರನ್ನು ಹೇಳಿದ್ದಾರೆ.
ಬಿಗ್ ಬಾಸ್’ನಲ್ಲಿ ಈ ವಾರ ಎರಡು ಟೀಂ ಮಾಡಲಾಗಿತ್ತು. ಒಂದು ಟೀಂಗೆ ನಂದು ನಾಯಕಿ. ಮತ್ತೊಂದು ಟೀಂಗೆ ಸೋಮಣ್ಣ ಕ್ಯಾಪ್ಟನ್ ಆಗಿದ್ದರು. ಒಂದು ಟಾಸ್ಕ್ನಲ್ಲಿ ನಂದು, ಜಶ್ವಂತ್ ಹಾಗೂ ಚೈತ್ರಾ ಟಾಸ್ಕ್ ಆಡಲು ಇಳಿದರು. ಈ ಟಾಸ್ಕ್ಗೆ ನಾನು ಕೂಡ ಬರುತ್ತೀನಿ ಎಂದರು ಜಯಶ್ರೀ. ಆದರೆ, ಈ ಟಾಸ್ಕ್ನಲ್ಲಿ ಅವರಿಗೆ ಅವಕಾಶ ನೀಡಿಲ್ಲ ನಂದು. ಈ ವಿಚಾರಕ್ಕೆ ಜಯಶ್ರೀ ಸಿಟ್ಟಾಗಿದ್ದಾರೆ.
‘ಎಲ್ಲದೂ ನಿಮ್ಮದೇ ನಿರ್ಧಾರ ಎಂದಾದರೆ, ಟೀಂ ಎಂದು ಏಕೆ ಇಟ್ಟುಕೊಂಡಿದ್ದೀರಾ? ನನ್ನನ್ನು ಏಕೆ ಬಿಟ್ಟಿದ್ದೀರಾ? ಹೀಗೆ ಅಂತಾದರೆ ನಾನು ಇನ್ಮುಂದೆ ಆಟ ಆಡಲ್ಲ’ ಎಂದು ಘೋಷಿಸಿದರು ಜಯಶ್ರೀ. ಈ ಚರ್ಚೆ ಎಲ್ಲಿಂದ ಎಲ್ಲಿಗೋ ತಲುಪಿತು. ಜಯಶ್ರೀ ಮಾತನ್ನು ಕೇಳಿ ಕ್ಯಾಪ್ಟನ್ ನಂದು ಸಿಟ್ಟಾದರು. ಮುಂದಿನ ಟಾಸ್ಕ್ಗೆ ಅವಕಾಶ ನೀಡುವ ಭರವಸೆ ಕೊಟ್ಟರೂ ಜಯಶ್ರೀ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೂ ಅವರ ಮನಸ್ಸು ಬದಲಾಯಿತು.
ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!