Bigboss News:
‘ಬಿಗ್ ಬಾಸ್’ ಒಟಿಟಿಯಲ್ಲಿ ಜಯಶ್ರೀ ಅವರು ಜಗಳ ಆಡುವ ಮೂಲಕವೇ ಹೈಲೈಟ್ ಆಗುತ್ತಿದ್ದಾರೆ. ನಂದಿನಿ ಜತೆ ಜಯಶ್ರೀ ಸಾಕಷ್ಟು ಕಿರಿಕ್ ಮಾಡಿಕೊಂಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್ ವೇಳೆಯೂ ಜಯಶ್ರೀ ಕೆಲ ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಮಾಡಿದ ತಪ್ಪಿನಿಂದಾಗಿ ಮನೆಯವರಿಗೆ ತೊಂದರೆ ಉಂಟಾಗಿದೆ ಎನ್ನಲಾಗುತ್ತಿದೆ.
‘ಬಿಗ್ ಬಾಸ್’ ಈ ವಾರ ಕ್ಯಾಪ್ಟನ್ಸಿಗೆ ಒಂದು ಟಾಸ್ಕ್ ನೀಡಿದರು. ತಿರುಗುವ ಚಕ್ರದ ಮೇಲೆ ಒಂದು ಕುರ್ಚಿ ಇರುತ್ತದೆ. ಅದರ ಮೇಲೆ ಕುಳಿತು ಕೊಳ್ಳಬೇಕು. ಮನಸ್ಸಿನಲ್ಲೇ ಸಮಯ ಎಣಿಸಬೇಕು. 15 ನಿಮಿಷನ್ನು ಸರಿಯಾಗಿ ಕೌಂಟ್ ಮಾಡುವ ಸ್ಪರ್ಧಿ ಗೆಲ್ಲುತ್ತಾನೆ. ಈ ಟಾಸ್ಕ್ ವೇಳೆ ಸ್ಪರ್ಧೆಯಲ್ಲಿ ಇದ್ದವರ ಚಿತ್ತವನ್ನು ಬೇರೆಡೆ ಸೆಳೆಯಲು ಅವಕಾಶ ನೀಡಲಾಗಿತ್ತು. ಎಲ್ಲರೂ ಕಿರುಚಾಡಿ, ಕೂಗಾಡಿ ಸ್ಪರ್ಧೆಗೆ ಇಳಿದವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದರು. ಜಯಶ್ರೀ ಬೇರೆಯದೇ ಮಾರ್ಗ ತುಳಿದರು. ಆರಂಭದಲ್ಲಿ ಅವರು ಕುಳಿತವರ ಮೇಲೆ ನೀರು ಎರಚಲು ಶುರುಮಾಡಿದರು. ನಂತರ ದಿಂಬುಗಳನ್ನು ಎಸೆದರು. ಕೊನೆಗೆ ಇನ್ನೂ ಒಂದು ಹಂತ ಮುಂದೆ ಹೋದರು. ಪರ್ಫ್ಯೂಮ್ ಬಾಟಲಿಗಳನ್ನು ತಂದು ಅದನ್ನು ಸ್ಪ್ರೇ ಮಾಡಲು ಶುರು ಮಾಡಿದರು. ನಂದಿನಿ ಸ್ಪರ್ಧೆಗೆ ಇಳಿದಾಗ ಪರ್ಫ್ಯೂಮ್ ಸ್ಪ್ರೇ ಮಾಡಿದರು. ಇದರಿಂದ ನಂದಿನ ಕಣ್ಣಿಗೆ ಉರಿ ಆಗಿದೆ. ಇದನ್ನು ಬಿಗ್ ಬಾಸ್ ಸಹಿಸಲಿಲ್ಲ. ಆಗಲೇ ಜಯಶ್ರೀಗೆ ಎಚ್ಚರಿಕೆ ನೀಡಿದರು. ಆದರೂ ಅವರ ಆ್ಯಟಿಟ್ಯೂಡ್ ಬದಲಾಗಲಿಲ್ಲ. ನೀರನ್ನು ಎರೆಚುವುದನ್ನು ಮುಂದುವರಿಸಿದರು. ನಂತರ ಬಿಗ್ ಬಾಸ್ ಶಿಕ್ಷೆ ಕೊಡುವ ಘೋಷಣೆ ಮಾಡಿದ್ರು.
‘ಜಯಶ್ರೀ ಮಾಡಿದ ತಪ್ಪಿನಿಂದ ಬೇರೆಯವರಿಗೆ ತೊಂದರೆ ಆಗಿದೆ. ಈ ಕಾರಣದಿಂದ ಈ ವಾರದ ಉಳಿದುಕೊಂಡರೆ ಮುಂದಿನ ವಾರದ ಎಲಿಮಿನೇಷನ್ಗೆ ನೀವು ನೇರವಾಗಿ ನಾಮಿನೇಟ್ ಆಗುತ್ತಿದ್ದೀರಿ’ ಎಂದು ಬಿಗ್ ಬಾಸ್ ಘೋಷಿಸಿದರು. ಇದರಿಂದ ಜಯಶ್ರೀಗೆ ತೀವ್ರ ಹಿನ್ನಡೆ ಆಗಿದೆ ಎನ್ನಲಾಗುತ್ತಿದೆ. ಎಲಿಮಿನೇಷನ್ಗೆ ಮತ್ತಷ್ಟು ಹತ್ತಿರವಾಗಿದ್ದಾರೆ.