Friday, April 19, 2024

Latest Posts

‘ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ ಎಂದು ಕಿಚ್ಚನ ವಾರ್ನಿಂಗ್ ಯಾರಿಗೆ ಗೊತ್ತಾ..?

- Advertisement -

Bigboss  news:

ಬಿಗ್ ಬಾಸ್ ಆರಂಭವಾಗಿ 2 ವಾಋಗಳು ಕಳೆದವು.ಇದರ ಜೊತೆ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆದ್ರು.ಜೊತೆಗೆ ಇದೀಗ ಮನೆಯೊಳಗೆ ಗುಂಪುಗಾರಿಕೆ ಶುರುವಾಗಿದೆ. ಈ ವಾರ ಕಿಚ್ಚ ಸುದೀಪ್ ಕೊಂಚ ಸಿಟ್ಟಾಗಿದ್ದು ಒಬ್ಬರಿಗೆ ಬಾಗಿಲು ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ವಾರ ಎಲ್ಲರೂ ಒಬ್ಬೊಬ್ಬರನ್ನು ನಾಮಿನೇಟ್​ ಮಾಡಬೇಕು. ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್​ ಮಾಡಬೇಕೇ ಹೊರತು, ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ. ಆದರೆ ಜಶ್ವಂತ್​ ಅವರು ಆ ನಿಯಮ ಮುರಿದಿದ್ದಾರೆ. ಗರ್ಲ್​ಫ್ರೆಂಡ್​ ನಂದು ಜೊತೆ ಅವರು ನಾಮಿನೇಷನ್​ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಗಮನಿಸಿದ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

‘ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ. ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದೀರಿ. ಹಾಗಿದ್ದ ಮೇಲೆ ಚರ್ಚೆ ಮಾಡ್ಕೊಂಡು ನಾಮಿನೇಟ್​ ಮಾಡುವಂತಿಲ್ಲ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಇದನ್ನು ಜಶ್ವಂತ್​ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕಾಗಿದೆ.

ಬಿಗ್ ಬಾಸ್ ಮನೆಯಿಂದ ಮತ್ತೊಬ್ಬರು ಔಟ್…!

ಬಿಗ್ ಬಾಸ್ ಫಟಾಫಟ್ ಸ್ಟೋರಿ:

- Advertisement -

Latest Posts

Don't Miss