BIGG BOSS Kannada: ಈ ಬಾರಿಯ ಬಿಗ್ಬಾಸ್ ಕನ್ನಡ ಸೀಸನ್ 11 ಮೊದಲಿಗಿಂತ ಡಿಫ್ರೆಂಟ್ ಆಗಿತ್ತು. ಏಕೆಂದರೆ, ಈ ಬಾರಿ ಸ್ವರ್ಗ- ನರಕ ಅನ್ನೋ ಕಾನ್ಸೆಪ್ಟ್ ಇತ್ತು. ಆದರೆ ಇಂದಿನಿಂದ ಸ್ವರ್ಗ ನರಕ ಅನ್ನೋ ಕಾನ್ಸೆಪ್ಟ್ ಇರಲ್ಲ. ಏಕೆಂದರೆ, ನರಕಕ್ಕೆ ಹಾಕಿದ್ದ ಬೇಲಿಯನ್ನ ಕಿತ್ತು ಹಾಕಲಾಗಿದೆ.
ಕ್ರೇನ್ ಬಂದಿದ್ದು, ಜೊತೆಗೆ ನಾಲ್ಕೈದು ಜನ ಮುಸುಕುಧಾರಿಗಳು ಬಂದು, ಬಿಗ್ಬಾಸ್ ಸ್ಪರ್ಧಿಗಳ ಎದುರೇ, ನರಕಕ್ಕೆ ಹಾಕಿದ ಬೇಲಿ ಕಿತ್ತು ಹಾಕಿದ್ದಾರೆ. ಇವರನ್ನು ನೋಡಿ ಸ್ಪರ್ಧಿಗಳು ಕಂಗಾಲಾಗಿದ್ದಾರೆ. ಆದರೆ ಇದು ಯಾರೋ ದಾಂಡಿಗರ ಕೆಲಸವಲ್ಲ. ಬದಲಾಗಿ, ಸ್ವರ್ಗ ನರಕ ಕಾನ್ಸೆಪ್ಟ್ ಕ್ಯಾನ್ಸಲ್ ಮಾಡಿ, ಮೊದಲಿನಂತೆ ನಾರ್ಮಲ್ ಆಗಿ ಬಿಗ್ಬಾಸ್ ನಡೆಸುವ ಕೆಲಸ
ಏಕೆಂದರೆ, ನರದಲ್ಲಿ ಇರುವವರಿಗೆ ಶೌಚ ಬಳಸುವ ಅವಕಾಶವಿರಲಿಲ್ಲ. ನರಕದಲ್ಲಿ ಇರುವವರಿಗೆ ಸರಿಯಾಗಿ ಊಟ ಕೊಟ್ಟಿರಲಿಲ್ಲ. ಗಂಜಿ ಊಟ ಕೊಡಲಾಗುತ್ತಿತ್ತು. ಇದೆಲ್ಲ ಮಾನವ ಹಕ್ಕು ಉಲ್ಲಂಘನೆ ಅಡಿಯಲ್ಲಿ ಬರುತ್ತದೆ. ಇದನ್ನು ಇಲ್ಲಿಗೆ ನಿಲ್ಲಿಸದಿದ್ದಲ್ಲಿ, ಕ್ರಮ ಕೈಗೊಳ್ಳಬೇಕಾಗುತ್ತೆದ ಎಂದು, ಬಿಗ್ಬಾಸ್ಗೆ ನೋಟೀಸ್ ಕಳಿಸಿದ್ದರು.
ಆದರೂ ಸ್ವರ್ಗ ನರಕ ಕಾನ್ಸೆಪ್ಟ್ ಚಾಲ್ತಿಯಲ್ಲಿತ್ತು. ಆಗ ಮಹಿಳಾ ಆಯೋಗ ಅಧ್ಯಕ್ಷ ನಾಗಲಕ್ಷ್ಮೀ ಬಾಯಿ ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಕಂಪ್ಲೆಂಟ್ ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡ ಆಯೋಗ, ಬಿಗ್ಬಾಸ್ಗೆ ಎಚ್ಚರಿಕೆ ನೀಡಿತ್ತು. ಹಾಗಾಗಿ ಇಂದಿನಿಂದ ಬಿಗ್ಬಾಸ್ ಕನ್ನನಡ ಸೀಸನ್ 11ನಲ್ಲಿ ಸ್ವರ್ಗ ನರಕ ಕಾನ್ಸೆಪ್ಟ್ ಕ್ಯಾನ್ಸಲ್ ಮಾಡಲಾಗಿದೆ.