- Advertisement -
State News:
ಸಿದ್ದರಾಮಯ್ಯ ಆರ್ ಎಸ್ ಎಸ್ ವಿಚಾರವಾಗಿ ಹೇಳಿದಂತಹ ಹೇಳಿಕೆಯಿಂದ ಕೇಸರಿ ಕಳಿಗಳು ಸಿದ್ದು ವಿರುದ್ಧ ಗರಂ ಆಗಿದ್ದಾರೆ.ಪಿಎಫ್ ಐ ಬ್ಯಾನ್ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಆರ್ ಎಸ್ ಎಸ್ ಕೂಡಾ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಅದನ್ನೂ ಬ್ಯಾನ್ ಮಾಡಬೇಕು ಎಂಬ ಹೇಳಿಕೆ ನೀಡಿದ್ರು. ಇದಕ್ಕೆ ವಿರುದ್ಧವಾಗಿ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಸಿದ್ದು ವಿರುದ್ಧವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಡಿದೆದ್ದಿದ್ದಾರೆ. ದೇಶದಲ್ಲಿ ಗೋ ಹಂತಕರನ್ನು ರಕ್ಷಣೆ ಮಾಡಿದ್ದು ಕಾಂಗ್ರೆಸ್ಸಿಗರು. ಹಾಗೆಯೇ ಪಿಎಫ್ ಐ ಎಸ್ ಡಿ ಪಿ ಐ ಗೆ ಬಲ ನೀಡಿದ್ದೇ ಮೊದಲು ಕಾಂಗ್ರೆಸ್ಸಿಗರು ಮೊದಲು ದೇಶದಿಂದ ಕಾಂಗ್ರೆಸ್ ಬ್ಯಾನ್ ಮಾಡಬೇಕು ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಮೇಲೆ ಸಿಬಿಐ ಗೆ ಬಹಳ ಪ್ರೀತಿಯಂತೆ ..?! ಡಿ.ಕೆ.ಶಿ ಹೀಗೆ ಹೇಳಿದ್ಯಾಕೆ..?!
- Advertisement -