BJP Protest :ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ..!

ಧಾರವಾಡ :ರಾಜ್ಯದ ಲ್ಲಿನ ಆಡಳಿತಾರೂಢ ಕಾಂಗ್ರೆಸ್ ‌ಸರಕಾರ ರೈತ ‌ಮತ್ತು‌‌ ಜನವಿರೋಧಿ‌ ಅನುಸರಿಸುತ್ತಿದೆ ಎಂದು ಆರೋಪಿಸಿ ಧಾರವಾಡ-71 ಕ್ಷೇತ್ರದ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಡಪಾ ಮೈದಾನದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ‌ಮೂಲಕ ಆಗಮಿಸಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ‌ಕಚೇರಿ‌ ಎದುರು‌ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಅಮೃತ ದೇಸಾಯಿ,
ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಮಳೆ ವಿಳಂಬದಿಂದ ರೈತರು ಸಂಕಷ್ಟ ಎದುರಿಸು ಪರಿಸ್ಥಿತಿ ಇದ್ದರೂ ಬರ ಘೋಷಣೆ ಮಾಡಿಲ್ಲ, ಬೆಳೆವಿಮೆ, ಬೆಳೆ ಪರಿಹಾರ ನೀಡುತ್ತಿಲ್ಲ. ಈ‌‌ ಮೂಲಕ ರೈತರನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಗ್ರಾಮೀಣ‌ ಜಿಲ್ಲಾ ಅಧ್ಯಕ್ಷ ‌ಬಸವರಾಜ ಕುಂದಗೋಳ ಮಠ,ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಂಕರ‌ಕೊಮಾರದೇಸಾಯಿ, ಮುಖಂಡರಾದ ಶಶಿಮೌಳಿ‌ ಕುಲಕರ್ಣಿ,
ಸುನೀಲ ಮೋರೆ, ರುದ್ರಪ್ಪ ಅರಿವಾಳ, ಸಂಗನಗೌಡ ರಾಮನ ಗೌಡ್ರ, ನಿಜನಗೌಡ ಪಾಟೀಲ, ಶಕ್ತಿ ಹಿರೇಮಠ, ಶಿವು ಬೆಳಾರದ, ಮಂಜುನಾಥ ನಡಟ್ಟಿ, ನಾಗರಾಜ ಗಾಣಿಗೇರ, ಶ್ರೀನಿವಾಸ ಕೋಟ್ಯಾನ್, ಈಶ್ವರ ಗಾಣಿಗೇರ, ಮಡಿವಾಳಪ್ಪ‌ ಸಿಂದೋಗಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.

Dharawad: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಣೆ ಕುರಿತು ಸಭೆ..!

Blood donate: ಬಿಜೆಪಿ ಯುವ ಮೋರ್ಚಾ ಗುಡಿಬಂಡೆ ಮಂಡಲ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Shivaraj tangadagi ; ಸಿಟಿ ರವಿ ಮಾತಿಗೆ ತಂಗಡಗಿ ವಾಗ್ದಾಳಿ..!

About The Author