Sunday, September 8, 2024

Latest Posts

ನಟರಾಜಸ್ವಾಮಿ ಮೂರ್ತಿಯನ್ನು ಮನೆಯಲ್ಲಿ ಇಡಬಹುದೇ..? ಯಾವ ಮೂರ್ತಿಗಳ ಪೂಜೆ ನಿಷಿದ್ಧ ಎಂದು ತಿಳಿದುಕೊಳ್ಳೋಣ..!

- Advertisement -

ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಪೂಜೆ, ಪುನಸ್ಕಾರ, ಉಪವಾಸ ಮತ್ತು ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅನೇಕ ಜನರು ತಮ್ಮ ಪೂಜಾ ಕೊಠಡಿಯಲ್ಲಿ ವಿವಿಧ ರೂಪಗಳಲ್ಲಿರುವ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ ಮನೆಯಲ್ಲಿ ಕೆಲವು ರೀತಿಯ ವಿಗ್ರಹಗಳನ್ನು ಪೂಜಿಸುವುದು ಅಥವಾ ಪ್ರತಿಷ್ಠಾಪಿಸುವುದು ನಿಷೇದವೆಂದು ನಿಮಗೆ ಗೊತ್ತೇ ..? ಈ ನಿಷಿದ್ಧ ವಿಗ್ರಹಗಳನ್ನು ಮನೆಯಲ್ಲಿ ಅಥವಾ ಪೂಜಾ ಕೊಠಡಿಗಳಲ್ಲಿ ಇಡುವುದರಿಂದ ಅನೇಕ ಸಮಸ್ಯೆಗಳು ಮತ್ತು ಅಶುಭ ಘಟನೆಗಳು ಉಂಟಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ ಈ ವಿಗ್ರಹಗಳನ್ನು ಪೂಜಿಸಿದರೆ ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ. ಅದೇ ಕ್ರಮದಲ್ಲಿ, ಮುರಿದ ವಿಗ್ರಹಗಳನ್ನು ಪೂಜಿಸಬಾರದು ಆದರೆ, ಹಿರಿಯರ ಮಾತಿಗೆ ಕಿವಿಗೊಡದೆ ಪೂಜೆ ಮಾಡುವುದು ಅಥವಾ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರಿಂದ ಜೀವನದಲ್ಲಿ ಅನೇಕ ಕೆಟ್ಟ ಫಲಿತಾಂಶಗಳು ಅನುಭವಿಸುವುದು ಖಂಡಿತ ಎಂದು ನಂಬಲಾಗಿದೆ . ಜೊತೆಗೆ ಒಳ್ಳೆಯ ಫಲಿತಾಂಶ ಬರುವುದಿಲ್ಲ ಎಂಬ ನಂಬಿಕೆ. ನಿಮ್ಮ ಮನೆಯಲ್ಲಿ ಈಗಾಗಲೇ ಅಂತಹ ವಿಗ್ರಹಗಳು ಇದ್ದರೆ, ಶಾಸ್ತ್ರಗಳ ಪ್ರಕಾರ ನೀವು ತಕ್ಷಣ ನದಿಯ ಹರಿವಿನಲ್ಲಿ ಅವುಗಳನ್ನು ಮುಳುಗಿಸಬೇಕು. ಹಾಗಾದರೆ ಆ ವಿಗ್ರಹಗಳು ಯಾವುವು ಎಂದು ಈಗ ತಿಳಿಯೋಣ.

ನಟರಾಜ ಸ್ವಾಮಿ:
ಉಗ್ರರೂಪದಲ್ಲಿ ತಾಂಡವ ಮಾಡುತ್ತಿರುವ ಶಿವನೇ ನಟರಾಜಸ್ವಾಮಿ. ಸಕಲ ಶಾಸ್ತ್ರಗಳ ಸೃಷ್ಟಿಕರ್ತನಾದ ಶಿವನು ನೃತ್ಯದ ಸೃಷ್ಟಿಕರ್ತನೂ ಹೌದು. ಏಕೆಂದರೆ ಶಿವನು ನಟರಾಜಸ್ವಾಮಿಯಾಗಿ ಬೇಕರ ರೂಪದಲ್ಲಿರುತ್ತಾನೆ ಆ ವಿಗ್ರಹ ಮನೆಯಲ್ಲಿ ಇರುವುದು ಒಳ್ಳೆಯದಲ್ಲ ಎಂದು ನಿಷೇದಿಸುತ್ತಾರೆ .

ಶನಿ ದೇವರು:
ಮನೆಯಲ್ಲಿ ಶನಿಯ ವಿಗ್ರಹವನ್ನು ಇಡುವುದನ್ನು ಸಹ ನಿಷೇಧಿಸಲಾಗಿದೆ. ಸೂರ್ಯನ ಮಗನಾದ ಶನಿ ದೇವರನ್ನು ಯಾವಾಗಲೂ ಮನೆಯ ಹೊರಗೆ ಪೂಜಿಸಲಾಗುತ್ತದೆ ಎಂದು ಹಿರಿಯರು ನಂಬಿದ್ದರು. ಹಾಗಾಗಿ ಮನೆಯಲ್ಲಿ ಶನಿದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಡಿ.

ಭೈರವ್ ಬಾಬಾ:
ಭೈರವ್ ಬಾಬಾ ಕೂಡ ಶಿವನ ರೂಪವೆಂದು ಪರಿಗಣಿಸಲಾಗಿದೆ. ಆದರೆ ಭೈರವ್ ಬಾಬಾರ ಸಂಬಂಧವು ತಂತ್ರ-ಮಂತ್ರ ವಿದ್ಯೆಗಳಿಗೆ ಸಂಬಂಧಿಸಿದೆ. ಆದ್ದರಿಂದ ಭೈರವ ಬಾಬಾರನ್ನು ಮನೆಯಲ್ಲಿ ಪ್ರತಿಷ್ಠಾಪಿಸಬಾರದು.

ರಾಹು-ಕೇತು:
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಲವನ್ನು ದುಷ್ಟ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ರಾಹು-ಕೇತು ದೋಷವು ಕೆಟ್ಟ ವಿಷಯಗಳನ್ನು ಪ್ರಾರಂಭಿಸುತ್ತದೆ ಅಥವಾ ಕೆಟ್ಟ ಜರಗಳು ಪ್ರಾಂಭವಾಗತ್ತದೆ. ಇಲ್ಲದಿದ್ದರೆ ಕೆಟ್ಟ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಹಾಗಾಗಿ ಮನೆಯಲ್ಲಿ ಅಪ್ಪಿತಪ್ಪಿಯೂ ರಾಹು-ಕೇತು ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಡಿ.

ವಾಸ್ತು ಶಾಸ್ತ್ರದ ಪ್ರಕಾರ 7 ಕುದುರೆ ವರ್ಣಚಿತ್ರಗಳನ್ನು ಇಡುವ ಪ್ರಯೋಜನಗಳು..!

ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ಮಂಗಳವಾರ ಹನುಮಂತನಿಗೆ ಈ ನಾಲ್ಕು ಪರಿಹಾರಗಳನ್ನು ಪ್ರಯತ್ನಿಸಿ..!

ಗರುಡ ಪುರಾಣದಲ್ಲಿರುವ ಸಾವಿನ ರಹಸ್ಯ..! ಮನುಷ್ಯ ಸತ್ತ 13 ದಿನ ಆ ಮನೆಯಲ್ಲಿ ಏನಾಗುತ್ತೆ ಗೊತ್ತಾ..?

 

 

- Advertisement -

Latest Posts

Don't Miss