ಎಷ್ಟೋ ಜನ ತಾನು ಉತ್ತಮ ಉದ್ಯೋಗಿಯಾಗಬೇಕು ಎಂದು ಶಾಲಾ ಕಾಲೇಜನ್ನು ಅರ್ಧಕ್ಕೆ ಬಿಟ್ಟು, ಕೆಲಸಕ್ಕೆ ಸೇರುತ್ತಾರೆ. ಶ್ರೀಮಂತರಾದವರು ಒಂದಿಷ್ಟು ಬಂಡವಾಳ ಹೂಡಿ, ಬ್ಯುಸಿನೆಸ್ ಶುರು ಮಾಡ್ತಾರೆ. ಆದ್ರೆ ಅದರಲ್ಲಿ ಯಶಸ್ಸು ಕಾಣೋದು ಕೆಲವರು ಮಾತ್ರ. ಹಾಗಾದ್ರೆ ಉತ್ತಮ ಉದ್ಯಮಿಯಾಗಬೇಕು, ಯಶಸ್ಸು ಸಾಧಿಸಬೇಕಂದ್ರೆ ಚಾಣಕ್ಯ ನೀತಿಯನ್ನು ಅನುಸರಿಸಬೇಕು. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ಸಮಯ ವ್ಯರ್ಥ ಮಾಡದೇ, ಕೆಲಸದಲ್ಲಿ ತೊಡಗಿಕೊಳ್ಳುವುದನ್ನು ಕಲಿಯಬೇಕು. ಸರಿಯಾದ ಸಮಯಕ್ಕೆ ಎದ್ದು, ಸ್ನಾನಾದಿಗಳನ್ನ ಮಾಡಿ, ಆಹಾರ ಸೇವಿಸಿ, ಕೆಲಸ ಶುರು ಮಾಡಬೇಕು. ಸರಿಯಾದ ಸಮಯಕ್ಕೆ ಊಟ ತಿಂಡಿ ತಿಂದು, ಕೆಲಸವನ್ನು ಸಹ ಸರಿಯಾದ ರೀತಿಯಲ್ಲಿ ಮಾಡಬೇಕು. ದುರಭ್ಯಾಸ, ದುಶ್ಚಟಗಳನ್ನು ಹೊಂದಿರಬಾರದು. ಇದರಿಂದ ನೀವು ಉತ್ತಮ ಉದ್ಯಮಿಯಾಗಲು ಸಾಧ್ಯವಿಲ್ಲ.
ಎರಡನೇಯದಾಗಿ ಹಣದ ಹಿಂದೆ ಹೋಗುವುದು, ಹಣಕ್ಕಾಗಿಯೇ ಉದ್ಯಮ ಮಾಡುವುದೆಲ್ಲ ಮಾಡಬಾರದು. ಉತ್ತಮ ಉದ್ಯೋಗಿಯಾಗಬೇಕು ಅಂತಾ ಪ್ರಯತ್ನಿಸೋದು ಒಳ್ಳೆಯ ವಿಷಯವೇ ಆದ್ರೆ, ನೀವು ದುಡ್ಡಿನ ಬದಲಾಗಿ, ನಿಮ್ಮ ಕೆಲಸದ ಮೇಲೆ ಗಮನ ಕೊಡಬೇಕು. ಕೆಲಸ ಉತ್ತಮವಾಗಿದ್ದರೆ, ದುಡ್ಡು ತನ್ನಿಂದ ತಾನೇ ಬರುತ್ತದೆ.
ಹಲವು ಉದ್ಯಮಿಗಳು ನಿಯತ್ತಿನಿಂದ ಉದ್ಯಮ ಮಾಡುವುದನ್ನು ಬಿಟ್ಟು, ಸುಳ್ಳು ಹೇಳಿ, ಮೋಸ ಮಾಡಿ ಹಣ ಮಾಡುತ್ತಾರೆ. ಅಂಥವರ ಉದ್ಯೋಗ, ಮತ್ತು ಅವರು ಕಪಟತನದಿಂದ ಗಳಿಸಿದ ಹಣ ಹೆಚ್ಚು ದಿನ ಅವರ ಬಳಿ ಉಳಿಯುವುದಿಲ್ಲ. ಹಾಗಾಗಿ ಯಾರಿಗೂ ಮೋಸ ಮಾಡದೇ, ಸುಳ್ಳು ಹೇಳದೇ, ನಿಯತ್ತಾಗಿ ಉದ್ಯಮ ಮಾಡಿದರೆ, ಯಶಸ್ಸು ಕಟ್ಟಿಟ್ಟ ಬುತ್ತಿ.
ಇನ್ನು ಉದ್ಯಮಿಗಳಿಗೆ ಇರಬೇಕಾದ ಮುಖ್ಯವಾದ ಗುಣ ಅಂದ್ರೆ ತಾಳ್ಮೆ. ನಿಮ್ಮ ಉದ್ಯಮಕ್ಕೆ ಸಾಥ್ ನೀಡುವವರಿಗೆ ಪದೇ ಪದೇ ಬಯ್ಯುವುದು, ಅಸಮಾಧಾನ ತೋರಿಸುವುದು, ಸಿಟ್ಟಿನಿಂದಿರುವುದೆಲ್ಲ ಒಳ್ಳೆಯದಲ್ಲ. ಯಾಕಂದ್ರೆ ಯಾರಿಗೆ ಸಿಟ್ಟು, ಅಸಮಾಧಾನ ಹೆಚ್ಚಿರುತ್ತದೆಯೋ, ಅವರು ಜೀವನದಲ್ಲೆಂದೂ ಯಶಸ್ಸು ಕಾಣುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




