Thursday, September 19, 2024

Latest Posts

ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಹೀಗೆ ಮಾಡಬೇಕಂತೆ..

- Advertisement -

ಮೊದಲೆಲ್ಲ ಕೆಲ ಹೆಣ್ಣು ಮಕ್ಕಳು ಮದುವೆಯಾಗುವ ದಿನ, ತಾಳಿ ಕಟ್ಟುವ ಸಮಯವೇ ಗಂಡನ ಮುಖ ನೋಡುತ್ತಿದ್ದರು. ಅಲ್ಲದೇ, ಜೀವನಪೂರ್ತಿ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಿದ್ದರು. ಆದ್ರೆ ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಅನ್ನೋದು ಕೆಲವರಿಗೆ ಆಟವಾಗಿಬಿಟ್ಟಿದೆ. ಇಂದು ಒಬ್ಬರ ಜೊತೆ ಕಾಲ ಕಳೆದು, ನಾಳೆ ಮತ್ತೊಬ್ಬರ ಜೊತೆ ಮದುವೆಯಾಗುವ ಜನ, ಸಂಗಾತಿ ಜೊತೆ ಸರಿಯಾಗಿ ಬಾಳುವುದೇ ಡೌಟು. ಹಾಗಾದ್ರೆ ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಪತಿ ಪತ್ನಿ ಮಧ್ಯೆ ಹೊಂದಾಣಿಕೆ ಇರುವುದು ತುಂಬಾ ಮುಖ್ಯ. ದಂಪತಿಯ ಮಧ್ಯೆ ಜಗಳ ಹಚ್ಚಲು ಹಲವರು ಕಾಯುತ್ತಿರುತ್ತಾರೆ. ಆದ್ರೆ ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ತುಂಬಾ ಮುಖ್ಯವಾಗಿದೆ. ಯಾಕಂದ್ರೆ ಎಲ್ಲಿ ಪ್ರೀತಿ, ನಂಬಿಕೆ, ಹೊಂದಾಣಿಕೆ ಇರುತ್ತದೆಯೋ, ಅಂಥ ಸಂಬಂಧವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.

ಇನ್ನು ರಾತ್ರಿ ಏನಾದರೂ ಜಗಳವಾಗಿದ್ದರೆ, ಬೆಳಿಗ್ಗೆ ನಗುನಗುತ್ತ ಪ್ರೀತಿಯಿಂದ ಮಾತನಾಡುತ್ತ ದಿನ ಶುರುಮಾಡಿ. ಅಥವಾ ರಾತ್ರಿ ಮಲಗುವುದರೊಳಗೆ ಆ ಜಗಳಕ್ಕೊಂದು ಇತಿಶ್ರೀ ಹಾಡಿಬಿಡಿ. ಜಗಳ ಒಂದು ದಿನ ಎರಡು ದಿನ ಇದ್ದರೆ ಉತ್ತಮ. ಅದನ್ನೇ ಎಳೆದುಕೊಂಡು ವಾರ, ತಿಂಗಳು ಜಗಳ ಮಾಡಿದರೆ ಸಂಬಂಧಕ್ಕೇ ಧಕ್ಕೆ ಬರುವ ಸಾಧ್ಯತೆ ಇರುತ್ತದೆ.

ಪತಿ ಪತ್ನಿ ಮಧ್ಯೆ ಪ್ರೀತಿ, ನಂಬಿಕೆ ಇರಬೇಕು. ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಯಾವಾಗಲೂ ಕಡಿಮೆಯಾಗಬಾರದು. ಮತ್ತು ನಂಬಿಕೆ ಕಳೆದುಕೊಳ್ಳುವ ಕೆಲಸ ಎಂದಿಗೂ ಮಾಡಬೇಡಿ. ಪತ್ನಿಯ ತಂದೆ ತಾಯಿ ಬಂಧು ಬಳಗಕ್ಕೆ ಪತಿ, ಮತ್ತು ಪತಿಯ ತಂದೆ ತಾಯಿ ಬಂಧು ಬಳಗಕ್ಕೆ ಪತ್ನಿ ಗೌರವ ನೀಡಬೇಕು. ಆಗ ಸಂಬಂಧ ಇನ್ನೂ ಉತ್ತಮವಾಗಿರುತ್ತದೆ.

ಕೊನೆಯದಾಗಿ ಪತಿ ಪತ್ನಿಗೆ ಊಟ, ಉಡುಗೆ, ಪ್ರೀತಿಯಲ್ಲಿ ಕಡಿಮೆ ಮಾಡಬಾರದು. ಆಕೆಗೆ ಉತ್ತಮವಾದ ಊಟ ಬಟ್ಟೆ ಕೊಡಿಸಿ, ಪ್ರೀತಿ ಮಾಡಿದರೆ, ಆಕೆಗೆ ನಿಮ್ಮ ಮೇಲಿನ ಪ್ರೀತಿ ಗೌರವ ಇಮ್ಮಡಿಯಾಗುತ್ತದೆ. ಇನ್ನು ಪತ್ನಿಯಾದಳು ಪತಿಯ ಸೇವೆ ಮಾಡಬೇಕು. ಅವನಿಗೆ ಅಡುಗೆ ಮಾಡಿ ಹಾಕುವುದು, ಮನೆಕೆಲಸ ಉತ್ತಮವಾಗಿ ಮಾಡುವುದು, ಆತನ ಆರ್ಥಿಕ ಸ್ಥಿತಿ ಹದಗೆಟ್ಟಾಗ ಧೈರ್ಯ ಹೇಳಿ ಸಾಥ್ ಕೊಡುವುದು, ಹೊರಗಿನವರ ಎದುರಿಗೆ ಪತಿಗೆ ಅವಮಾನಿಸದಿರುವುದು ಇತ್ಯಾದಿ ಗುಣ ಪತ್ನಿಯಲ್ಲಿರಬೇಕು. ಆಗ ದಂಪತಿ ಸುಖವಾಗಿ ಇರಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss