Wednesday, October 15, 2025

Latest Posts

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

- Advertisement -

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ ನಾಪತ್ತೆ ಹಿಂದಿನ ಮರ್ಡರ್ ಹಿಸ್ಟರಿ ತೆರೆದುಕೊಂಡಿದ್ದು, ಇಡೀ ಚಿಕ್ಕಮಗಳೂರು ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ.

ಭಾರತಿ ತವರು ಮನೆಯಿಂದ ಎರಡು ಲಕ್ಷ ಹಣ ತರಲಿಲ್ಲ ಎಂಬ ಕಾರಣಕ್ಕೆ ತಮ್ಮ ಗಂಡ ವಿಜಯ್ ಅವರಿಂದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರನೆ. ಗಂಡ ತನ್ನ ಪತ್ನಿಯನ್ನುಕೊಳವೆ ಬಾವಿಗೆ ಶವ ಹಾಕಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ ಮರ್ಡರ್ ಕಹಾನಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಕೊನೆಗೂ ಸತ್ಯವನ್ನು ಕಂಡು ಹಿಡಿದಿದ್ದಾರೆ. ಒಂದೂವರೆ ತಿಂಗಳ ನಡೆದ ಪೊಲೀಸರ ತನಿಖೆಯಲ್ಲಿ ಗಂಡ ವಿಜಯ್​ನೇ ಹಂತಕ ಎಂಬುದು ಗೊತ್ತಾಗಿದೆ.

ಕಳೆದ ತಿಂಗಳು 4 ರಂದು ಕಡೂರು ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ಮಿಸ್ ಆಗಿದ್ದಾಳೆ. ಶಿವಮೊಗ್ಗದ ಆಸ್ಪತ್ರೆಯಲ್ಲಿರೋ ಆಕೆಯ ಅಜ್ಜಿಯನ್ನ ನೋಡಿಕೊಂಡು ಬರುವುದಕ್ಕೆ ಅಂತ ಯರೇಹಳ್ಳಿ ಬಸ್ ನೀಲ್ದಾಣದಲ್ಲಿ ಜೀಪ್ ಹತ್ತಿಸಿ ಬಂದಿದ್ದೆ. ಆದ್ರೆ ಆಕೆ ಆಸ್ಪತ್ರೆಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಒಂದೂವರೆ ವರ್ಷದ ಮಗುವನ್ನ ಬಿಟ್ಟು ಹೋಗಿದ್ದಾಳೆ. ಮೊದಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನನ್ನ ಹೆಂಡತಿ ಭಾರತಿಯನ್ನ ಹುಡುಕಿ ಕೊಡಿ ಸರ್ ಎಂದು ದೂರು ನೀಡಿದ್ದ.

ಹಂತಕ ವಿಜಯ್ ಕೊಟ್ಟ ಮಿಸ್ಸಿಂಗ್ ಕಂಪ್ಲೇಂಟ್ ಹಿಂದೆ ಬಿದ್ದ ಕಡೂರು ಪೊಲೀಸರಿಗೆ ಭಾರತಿಯನ್ನ ಹುಡುಕಿ ಸುಸ್ತಾಗಿ ಹೋಗಿದ್ದರು. ಮತ್ತೊಂದೆಡೆ ಮೃತ ಭಾರತಿ ಅಣ್ಣ ಮಾರುತಿಗೆ ಮಾತ್ರ ತನ್ನ ತಂಗಿ ಕಳೆದು ಹೋಗಿಲ್ಲ ಎನ್ನುವ ಅನುಮಾನ ಕಾಡುತ್ತಲೇ ಇತ್ತು. ಅಷ್ಟೇ ಅಲ್ಲದೆ ಭಾರತಿ ಹುಡುಕಾಟಕ್ಕಾಗಿ ಪೂಜೆ ಮಾಡುತ್ತುದ್ದೇವೆ ಎಂದು ಅವಳ ಅಣ್ಣ ಮಾರುತಿಯನ್ನೂ ವಿಜಯ್ ಕರೆದುಕೊಂಡು ಹೋಗಿದ್ದು, ಆ ವೇಳೆ ಚಟ್ನಪಾಳ್ಯದ ಚೌಡೇಶ್ವರಿ ದೇವಾಲಯದ ಮರಕ್ಕೆ ಹೊಡೆದಿದ್ದ ಹರಕೆಯ ತಗಡನ್ನ ಮಾರುತಿ ಚೆಕ್‌ ಮಾಡಿದ್ದಾನೆ.

ಆಗಲೇ ತನ್ನ ತಂಗಿ ಭಾರತಿ ನಾಪತ್ತೆಯಾಗಿಲ್ಲ‌ ಕೊಲೆಯಾಗಿದ್ದಾಳೆ ಎನ್ನುವುದು ಮಾರುತಿಗೆ ಕನ್ಫರ್ಮ್ ಆಗಿದೆ. ಕೂಡಲೇ ಮಾರುತಿ ಕಡೂರು ಇನ್ಸ್ಪೆಕ್ಟರ್ ರಫೀಕ್‌ಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮೃತ ಭಾರತಿಯ ಗಂಡ ವಿಜಯ್, ಮಾವ ಗೋವಿಂದಪ್ಪ ಹಾಗೂ ಅತ್ತೆ ತಾಯಮ್ಮರನ್ನ ಎತ್ತಾಕೊಂಡು ಬಂದು ಪೊಲೀಸ್ ಸ್ಟೈಲ್‌ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಸತ್ಯ ಬಾಯಿಬಿಟ್ಟಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss