Sunday, September 8, 2024

Latest Posts

ರಾಯಚೂರಿನಲ್ಲಿ ಆರಾಧನಾ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

- Advertisement -

ರಾಯಚೂರು: ಆರಾಧನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜನಸಾಮಾನ್ಯರಿಗೆ, ಬಡವರಿಗೆ ವಿಶೇಷ ಸೇವೆ ದೊರೆಯಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ರಾಯಚೂರಿನ ರಾಜೇಂದ್ರ ಗುಂಜ್ ಸರ್ಕಲ್‍ನ ಬಳಿ ನಿರ್ಮಾಣ ಮಾಡಿರುವ 100 ಹಾಸಿಗೆಗಳ ಆರಾಧನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ನೂರು ಹಾಸಿಗೆಗಳ ಆಸ್ಪತ್ರೆ ರಾಯಚೂರಿನಲ್ಲಿ ಆಗಿರುವುದು ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಈ ಪ್ರದೇಶದಲ್ಲಿ ಆರೋಗ್ಯ ಸೌಕರ್ಯದ ಕೊರತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇದು ಹೆಚ್ವಿದೆ. ರಾಜ್ಯ ದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಈ ಪೈಕಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ 71 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನಾಗಿ ಉನ್ನತೀಕರಣ ಮಾಡಲಾಗುತ್ತಿದೆ. ಪೌಷ್ಟಿಕ ಆಹಾರಕ್ಕೆ ವಿಶೇಷ ಒತ್ತು ನೀಡಲಾಗಿದೆ. ಆರಾಧನಾ ಆಸ್ಪತ್ರೆ ಉತ್ತಮ ಚಿಕಿತ್ಸೆ ನೀಡಲಿ. ಆರೋಗ್ಯ ಸೇವೆ ದೇವರ ಸೇವೆ ಇದ್ದಂತೆ. ಇಲ್ಲಿಗೆ ಬರುವ ರೋಗಿಗಳು ಆರೋಗ್ಯವಂತರಾಗಿ ಹೊರಗೆ ಹೋಗುವಂತಾಗಲಿ ಎಂದರು.

ಸಾರ್ವಜನಿಕ ಸೇವೆಯಲ್ಲಿ ಆಸ್ಪತ್ರೆಯು ಮುಂದಿರಲಿ. ಈ ಆಸ್ಪತ್ರೆಯಿಂದ ನಮ್ಮ ಪ್ರಧಾನಿಗಳ ಆಯುಷ್ಮಾನ್ ಭಾರತ್ ಯೋಜನೆಯ ಸಂಪೂರ್ಣ ಲಾಭ ಪಡೆಯುವಂತಾಗಲಿ ಎಂದರು.

- Advertisement -

Latest Posts

Don't Miss