ಕರ್ನಾಟಕ ಟಿವಿ ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿದಂತೆ ಹೊಸದೊಂದು ಪ್ರಕರಣ ಸದ್ಯ ಹೆಚ್ಚು ಸುದ್ದಿ ಆಗಿದೆ.. ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಹೀರ್ ಮತ್ತು ಅವರ ಪಾಲುದಾರರು ಸುಮಾರು 18 ಕೋಟಿ ಮೌಲ್ಯದ ಎರಡು ಪಾಲಿಕೆ ಸ್ವತ್ತುಗಳನ್ನ ಕಬಳಿಸಿರುವ ಬಗ್ಗೆ ದೂರು ದಾಖಲಾಗಿದೆ.. ನಕಲಿ ದಾಖಲೆಗಳನ್ನ ಸೃಷ್ಠಿಸಿ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಹೀರ್ ಅವರೇ ಬಿಬಿಎಂಪಿ ವಲಯದ ಎರಡು ಅಮೂಲ್ಯವಾದ ಸ್ವತ್ತುಗಳನ್ನ ಕಬಳಿಸಿ, ಆ ಎರಡು ಸ್ವತ್ತುಗಳಲ್ಲಿ ನಿಯಮಬಾಹಿರವಾಗಿ ವಸತಿ ಸಂಕೀರ್ಣವನ್ನು ಹಾಗೂ ಕಲ್ಯಾಣ ಮಂಟಪವನ್ನು ನಿರ್ಮಿಸುತ್ತಿರುವ ದಾಖಲೆಗಳು ಲಭ್ಯವಾಗಿವೆ.. ಈ ಅಮೂಲ್ಯ ಪಾಲಿಕೆ ಸ್ವತ್ತುಗಳನ್ನು ಕೂಡಲೇ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಕಾನೂನು ರೀತ್ಯಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಆಯುಕ್ತರನ್ನು ಬೆಂಗಳೂರು ದಕ್ಷಿಣ ವಲಯದ ಬಿಜೆಪಿ ಅಧ್ಯಕ್ಷರಾದ ಎನ್.ಆರ್ ರಮೇಶ್ ಅವರು ಆಗ್ರಹಿಸಿದ್ದಾರೆ.. ಈ ಹಗರಣ ಅಷ್ಟೇ ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಇನ್ನೂ ಸಾಕಷ್ಟು ಹಗರಣಗಳು ನಡೆದಿದ್ವು.. ಈ ಹಗರಣಗಳಿಗೆ ಸಂಬಂಧಿಸಿದಂತೆ 345 ಪುಟಗಳ ದಾಖಲೆಗಳನ್ನು ಪತ್ರಿಕಾ ಘೋಷ್ಠಿಯಲ್ಲಿ ಎನ್.ಆರ್ ರಮೇಶ್ ಅವರು ಬಿಡುಗಡೆ ಮಾಡಿದ್ರು..