Tuesday, September 16, 2025

Latest Posts

1 ಎಕರೆಗೆ ₹25,000 ಪರಿಹಾರ ಕೊಡಿ

- Advertisement -

ಉತ್ತರ ಕರ್ನಾಟಕ ರೈತರ ಪರ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ, ನಿಖಿಲ್‌ ಕುಮಾರಸ್ವಾಮಿ ದನಿ ಎತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು, ಮಳೆಯಾಗ್ತಿದ್ದು, ಅತಿವೃಷ್ಟಿಯಿಂದ ರೈತರು ಮನೆ-ಆಸ್ತಿ-ಬೆಳೆ ಕಳೆದುಕೊಂಡಿದ್ದಾರೆ. ಆದ್ರೆ, ಸರ್ಕಾರದ ಯಾರೊಬ್ಬರೂ, ರೈತರ ಕಷ್ಟ ಕೇಳಿಲ್ಲ. ನೆರೆ ಹಾನಿ ಸಮೀಕ್ಷೆಯನ್ನೂ ಮಾಡಿಲ್ಲ. ಇದಕ್ಕೆ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ರು.

ಕಲಬುರಗಿಯಲ್ಲಿ ನಡದ ಸುದ್ದಿಗೋಷ್ಠಿಯಲ್ಲಿ, ರಾಜ್ಯದ ಕೃಷಿ ಸಚಿವರು ತಮ್ಮ ಕ್ಷೇತ್ರಕ್ಕೆ ಸಚಿವರಾ ಅಥವಾ ರಾಜ್ಯದ ಸಚಿವರಾ ಅಂತಾ ನಿಖಿಲ್ ಪ್ರಶ್ನಿಸಿದ್ದಾರೆ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ, 1 ಎಕರೆ ಪ್ರದೇಶದ ಬೆಳೆ ನಾಶಕ್ಕೆ 25,000 ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

ಇನ್ನು, ಕೆಕೆಆರ್‌ಡಿಬಿಯ ಕೆಲಸಗಳನ್ನು ಶೇಕಡ 30 ಪರ್ಸೆಂಟ್‌ಗೆ ಮಾರಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿ ನಗರದ ರಸ್ತೆಗಳೆಲ್ಲ ಗುಂಡಿ ಬಿದ್ದಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5,000 ಕೊಟ್ಟಿದೆ ಅಂತ ಹೇಳ್ತಾರೆ. ಕಲಬುರಗಿಯ ರಸ್ತೆಗಳ ನಿರ್ಮಾಣ ಬಿಡಿ. ಗುಂಡಿಗಳನ್ನು ಮುಚ್ಚುವ ಕೆಲಸವನ್ನು, ಕಲಬುರಗಿಯಿಂದಲೇ ಆರಂಭಿಸಲಿ ಎಂದು ಆಗ್ರಹಿಸಿದ್ರು.

14 ತಿಂಗಳು ಅಧಿಕಾರದಲ್ಲಿದ್ದ ವೇಳೆ ಕುಮಾರಣ್ಣ, ಸಾಲ ಮನ್ನಾ ಮಾಡಿದ್ದಾರೆ. ರೈತರ ವಿಷಯಕ್ಕೆ ಬಂದಾಗ ನಾವು ರಾಜಕೀಯ ಮಾಡಲ್ಲ. ಶಕ್ತಿ ಮೀರಿ ಹೋರಾಟ ಮಾಡುತ್ತೇವೆ . ರೈತರ ವಿಚಾರದಲ್ಲಿ ಜೆಡಿಎಸ್‌ ಹಿಂದೆ ಸರಿಯಲ್ಲ. ರೈತರ ಜೊತೆ ನಿಂತು ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಬೆಳೆ ಹಾನಿ ಪ್ರದೇಶದಲ್ಲಿ ಸಂತ್ರಸ್ತರ ಬೇಟಿ ಮಾಡುತ್ತಿದ್ದೇವೆ. ನಮ್ಮ ಪಕ್ಷದಿಂದ ವರದಿ ತಯಾರು ಮಾಡುತ್ತೇವೆ. ಅದನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ರು.

- Advertisement -

Latest Posts

Don't Miss