Thursday, June 19, 2025

Latest Posts

ಕಾಂಗ್ರೆಸ್ ಹೈಕಮಾಂಡ್‌ಗೆ ಕಮಾಂಡ್ ಇಲ್ಲ: ರಾಹುಲ್, ಸಿದ್ದು ಬಗ್ಗೆ ವ್ಯಂಗ್ಯವಾಡಿದ ಜೋಶಿ

- Advertisement -

Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಅಹಿಂದ ಹೆಸರಲ್ಲಿ ಸಮಜವಾದಿ ಎಂದು ಆಡಳಿತಕ್ಕೆ ಬಂದವರು. ಮೊದಲು ರೆಡ್ ಹ್ಯಾಂಡ್ ಆಗಿ ಸಿಕ್ಕ ನಂತರ, ಗವರ್ನರ್ ಮೇಲೆ ಆರೋಪ ಮಾಡಿದ್ರು. ನಮ್ಮ ರಾಜ್ಯದ ದುರಂತ ಏನಂದ್ರೆ ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಿದ್ರು.
ಆದ್ರು ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಸಿದ್ದರಾಮಯ್ಯ ಆಡಳಿತ ಯಾವ ರೀತಿ ವ್ಯವಸ್ಥೆ ಇದೆ ಅನ್ನೋದಕ್ಕೆ ಇದು ಉದಾಹರಣೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಸಾಮಾನ್ಯವಾಗಿ ನನ್ನ‌ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ. ಅವರಿಗೆ ಅನಕೂಲ ಆಗೋ ಪ್ರಶ್ನೆಗೆ ಉತ್ತರ ಕೊಡ್ತಾರೆ. ರಾಜ್ಯದ ಬಹುತೇಕ ಕಡೆ ವಿಧವಾ ವೇತನ,ವೃದ್ದಾಪ್ಯ ವೇತನ, ವಿದ್ಯಾರ್ಥಿ ವೇತನ ಬರ್ತಾ ಇಲ್ಲ. ರಾಜ್ಯವನ್ನು ಈ ಸ್ಥಿತಿಗೆ ತಂದು ರಾಜ್ಯಪಾಲರ ಮೇಲೆ ಹರಿಹಾಯ್ದರು. ಹೈಕೋರ್ಟ್ ಸುದೀರ್ಘವಾದ ವಿಚಾರಣೆ ಮಾಡಿದ ಬಳಿಕ ಷಡ್ಯಂತ್ರ ಅಂತಾರೆ. ಏನಿದು ನಾನ್ಸೆನ್ಸ್ ಅನ್ನೋದೆ ಅರ್ಥ ಆಗ್ತಿಲ್ಲ. ಕೋರ್ಟ್ ಸುದೀರ್ಘವಾಗಿ ವಿಚಾರಣೆ ಮಾಡಿದ ಬಳಿಕವೂ ಷಡ್ಯಂತ್ರ ಅನ್ನೋದು ಸರಿ ಅಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

62 ಕೋಟಿ ಮೌಲ್ಯದ 14 ಸೈಟ್ ಪಡೆದುಕೊಂಡಿದ್ದಾರೆ. ಇದನ್ನು ಅವರೇ ಹೇಳಿದ್ದು. ದಿನ ಬೆಳಿಗ್ಗೆ ರಾಜ್ಯಾಪಾಲರನ್ನು ಬೈತಾರೆ. ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಅಂತಾರೆ. ನೀವ ಇರೋ ಕಾಲದಲ್ಲಿ ಯಾರ ಯಾರ ಮೇಲೆ ಕೇಸ್ ಹಾಕಿದೀರಿ. ಕೋರ್ಟ್ ಹೇಳಿದ ನಂತರವೂ ಷಡ್ಯಂತ್ರ ಅಂದ್ರೆ ಸಿಬಿಐಗೆ ಕೊಡಿ. ಕಾಂಗ್ರೆಸ್ ಅಂದ್ರೆ ಬ್ರಷ್ಟಾಚಾರ,ಬ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಸಿಬಿಐಗೆ ಕೊಡಿ,ಯಾಕೆ ಭಯ ಕಾಡ್ತಿದೆಯಾ.? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಅವರಿಗೆ ಅವರ ಕುಟುಂಬ ಮುಖ್ಯ.
ರಾಜ್ಯಪಾಲರ ವಿರುದ್ದ ಮಾತಾಡೋದಕ್ಕೆ ಯಾವ ಅರ್ಥ ಇಲ್ಲ. ಯಡಿಯೂರಪ್ಪ ವಿಚಾರದಲ್ಲಿ ಸಿದ್ದರಾಮಯ್ಯ ಏನ ಅಂದ್ರು ಎಲ್ಲ ಗೊತ್ತಿದೆ. ಕಾಂಗ್ರೆಸ್ ನೈತಿಕವಾಗಿ ದಿವಾಳಿ ಎದ್ದು ಹೋಗಿದೆ. 2014 ರಲ್ಲಿ ಇವರು ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡ್ತೀದಾರೆ ಅಂತೀದ್ರು. ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು.  ನಿಮಗೆ ತಾಕತ್ ಇದ್ರೆ ಸಿಬಿಐಗೆ ಕೊಡಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಲ್ಲ. ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

ಗೋದ್ರಾ ಘಟನೆಯಲ್ಲಿ ಮೋದಿ ಅವರ ಮೇಲೆ FIR ದಾಖಲಾಗಿರಲಿಲ್ಲ. ಅಮಿತ್ ಶಾ ಅವರನ್ನು ಅರೆಸ್ಟ್ ಮಾಡಿದ್ರು. ಅಮಿತ್ ಶಾ ,ಮೋದಿ ಅವರನ್ನು ಸಿಲುಕಿಸಿ ಹಾಕೋ ಪ್ರಯತ್ನ ಮಾಡಿದ್ರು. ಗೋದ್ರಾ ಘಟನೆಯಲ್ಲಿ ಎಲ್ಲೂ ಮೋದಿ ಪಾತ್ರ ಇಲ್ಲ‌. ಅವರ ಮೇಲೆ ಆರೋಪ ಮಾಡಿದ್ರು. ಕಾಂಗ್ರೆಸ್ ಪ್ರಜಾಪ್ರಭುತ್ವದ ವಿರೋಧಿ ಪಾರ್ಟಿ ಎಂದು ಜೋಶಿ ಹರಿಹಾಯ್ದಿದ್ದಾರೆ.

ಸಂಪೂರ್ಣವಾಗಿ ನೈತಿಕತೆ ಬಿಟ್ಟಿದ್ದಾರೆ. ಲೋಕಾಯುಕ್ತ SP ಇರಲ್ಲ ಆಂದ್ರೆ ಏನ ಅರ್ಥ. ಸ್ನೇಹಮಯಿ ಕೃಷ್ಣ SP ಇಲ್ಲ ಎಂದು ದೂರು ಕೊಡೋ ತನಕ ಹೋಗತ್ತೆ. ಏನಾಗ್ತಿದೆ..? ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಹೆದರಿಸೋ ಕೆಲಸ ಮಾಡ್ತೀದಾರೆ. ಎಲೆಕ್ಟೋಲ್ ಬಾಂಡ್ ವಿಚಾರದಲ್ಲಿ ಸೋನಿಯಾ‌ಗಾಂಧಿ,ರಾಹುಲ್ ಗಾಂಧಿ ವಿರುದ್ದವೂ ದೂರು ಆಗಬೇಕಾಗತ್ತೆ ಎಂದ ಹೇಳಿದ್ದಾರೆ.

ಕಾಂಗ್ರೆಸ್ ನಿರ್ಲಜ್ಜತನ ಪ್ರದರ್ಶನ ಮಾಡ್ತಿದೆ. ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಹೆದರುತ್ತಿದ್ದಾರೆ ನೀವೇನ ಶುದ್ದ ಅಲ್ಲ ಅನ್ನೋ ತರಹ ಹೆದರಸ್ತೀದಾರೆ. ನಾನು ನಿಮ್ಮದು ತಗೀತಿವಿ ಎಂದು ಸಿದ್ದರಾಮಯ್ಯ ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೆ ಕಮಾಂಡ್ ಇಲ್ಲ. ನಮ್ಮ ರಾಜ್ಯದ ದುರಂತ ನೋಡಿ. ನ್ಯಾಷನಲ್ ಲೇವಲ್ ನಲ್ಲಿ ಸೋನಿಯಾ ಗಾಂಧಿ,ರಾಹುಲ್ ಗಾಂಧಿ A1.A2.. ಇಲ್ಲಿ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಪತ್ನಿ A1.A2 ಎಂದು ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಕೆಲವರು ಬೇಲ್ ಮೇಲೆ ಹೊರಗಡೆ ಇದ್ದಾರೆ. ಎಲ್ಲ ಸಂಗತಿಗಳಿಗೂ ಇವರು ಭಯಬೀತರಾಗಿದ್ದಾರೆ. ಜಮೀರ್ ಅಹಮ್ಮದ್ ಅವರ ಹೇಳಿಕೆಯನ್ನು ಕೋರ್ಟ್ ಗಮನಸತ್ತೆ. ಸಿದ್ದರಾಮಯ್ಯ ಅರೆಸ್ಟ್ ಮಾಡೋದು ಬಿಡೋದು ಅವರ ವಿವೇಚೆನೆಗೆ ಬಿಟ್ಟಿದ್ದು . ಅವರು ಹೋರಾಟ ಮಾಡಬಹುದು. ಕಾನೂನು ಹೋರಾಟ ಮಾಡಬಹುದು ,ನಾವು ಕೂಡಾ ಕಾನೂನು ಹೋರಾಟ ಮಾಡ್ತೀವಿ.. ರಾಜಕೀಯವಾಗಿ ನಾವು ಹೋರಾಟ ಮಾಡ್ತೀವಿ. ಕಾಂಗ್ರೆಸ್ ಯಾವಾಗಲೂ ಸಂವಿಧಾನ ಬುಡಮೇಲು ಮಾಡೋ ಕೆಲಸ ಮಾಡಿದೆ ಎಂದು ಜೋಶಿ ಹೇಳಿದ್ದಾರೆ.

ನಡ್ಡಾ, ನಿರ್ಮಲಾ ಸೀತಾರಾಮನ್ ಮೇಲೆ ದೂರು ದಾಖಲಿಸಲು ಆದೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಅದಕ್ಕೆ ಇದಕ್ಕೆ ಕಂಪೇರ್ ಮಾಡೋಕೆ ಆಗಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವಧಿಯಲ್ಲಿ ಕೂಡಾ ಎಲೆಕ್ಟ್ರೋಲ್ ಬಾಂಡ್ ನಲ್ಲಿ ಹಣ ತಗೆದುಕೊಂಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

- Advertisement -

Latest Posts

Don't Miss