Hubli News: ಹುಬ್ಬಳ್ಳಿ: ಸಂವಿಧಾನದ ರಕ್ಷಣೆ ಮತ್ತು ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭ”ನೆ ನಡೆಸಿದ್ದಾರೆ.
ಹುಬ್ಬಳ್ಳಿ ನಗರದ ಕಾರವಾರ ರಸ್ತೆಯ ಗಿರಣಿಚಾಳ ಮೈದಾನದಲ್ಲಿ ಕಾಂಗ್ರೆಸ್ ಹೋರಾಟಕ್ಕಾಗಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯ ಸಚಿವರು, ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿಯಿಂದ ಕಪ್ಪು ಬಟ್ಟೆ ಪ್ರದರ್ಶನ ಹಿನ್ನಲೆ, ಹುಬ್ಬಳ್ಳಿ ಧಾರವಾಡ ಪೊಲೀಸರು ಫುಲ್ ಅಲರ್ಟ್. ಕಪ್ಪು ಬಟ್ಟೆಯ ಪ್ರತಿಭಟನೆಗೆ ಅವಕಾಶ ನೀಡಿದಂತೆ ಅಧಿಕಾರಿಗಳು ರಕ್ಷಣಾ ಪರದೆ ಕ”್”ಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಬಹುದು ಎನ್ನುವ ಸಂಶಯದಿಂದ ಸ್ಥಳದಲ್ಲಿ ಹೈ ಅಲರ್ಟ್ ಆಗಿದೆ.
ಸಿಎಂ ಭಾಷಣದ ಸಮಯದಲ್ಲಿ ರಸ್ತೆ, ಅಕ್ಕಪಕ್ಕದ ಜನ ,ವಾಹನ ಕಾಣಿಸದಂತೆ ಶಾಮಿಯಾನ ಕಟ್ಟಲಾಗಿದೆ. ಗದಗ, ಬಾಗಲಕೋಟೆ, ಶಿರಸಿ, ಕಾರವಾರ, ಕೊಪ್ಪಳದಿಂದ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜಿಸಲಾಗಿದೆ. ಓರ್ವ ಐಜಿ, ಇಬ್ಬರು ಎಸ್ಪಿ, ನಾಲ್ವರು ಡಿಸಿಪಿ ಸೇರಿ ಒಟ್ಟು 2000 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ನಿಯೋಜಿಸಲಾಗಿದೆ.