Dehali News : ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಆಗಸ್ಟ್ 2 ಬುಧವಾರದಂದು ನಡೆದಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯ ನಾಯಕರ ಸಭೆ ನಡೆಯಿತು.
ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕರ್ನಾಟಕದ ಮಂತ್ರಿಗಳು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಲೋಕಸಭೆ ಪೂರ್ವ ತಯಾರಿ ನಿಮಿತ್ತ ಯೋಜಿಸಲಾಗಿದ್ದ ಸಭೆಯಲ್ಲಿ ರಾಜ್ಯವನ್ನು ಗೆದ್ದ ಕಾಂಗ್ರೆಸ್ ದೇಶ ಗೆಲ್ಲುವ ಪೂರ್ವ ತಯಾರಿಯ ಕುರಿತಾಗಿ ಚರ್ಚಿಸಲಾಯಿತು.
K Sudhakar : “ನನ್ನ ಮೌನ ಅಸಹಾಯಕತೆಯಲ್ಲ” : ಪ್ರದೀಪ್ ಈಶ್ವರ್ ಗೆ ಕೌಂಟರ್ ಕೊಟ್ಟ ಸುಧಾಕರ್
Eshwar Khandre : ಗಾಂಧೀಜಿ ಹುಟ್ಟಿದ ನಾಡಿನಲ್ಲಿ ವರ್ಣಭೇದ ನೀತಿ ಪೋಷಿಸುತ್ತಿರುವ ಬಿಜೆಪಿ : ಈಶ್ವರ್ ಖಂಡ್ರೆ ಕಿಡಿ
Narendra Modi : ಗ್ಯಾರಂಟಿ ವಿಚಾರ ಮುಂದಿಟ್ಟೇ ಲೋಕ ಸಭೆ ಚುನಾವಣೆ ಎದುರಿಸುತ್ತೇವೆ : ಮೋದಿಗೆ ಸಿಎಂ ಸವಾಲು..!