Friday, July 11, 2025

Latest Posts

ದರ್ಶನ್ ಕೇಸ್ ಅನ್ನೋದು ಜನರನ್ನು ಡೈವರ್ಟ್ ಮಾಡುವ ಕಾಂಗ್ರೆಸ್ ಪ್ರಯತ್ನ: ಜಗದೀಶ್ ಶೆಟ್ಟರ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿದ್ದು, ನಟ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಟ ದರ್ಶನ ಪ್ರಕರಣದ ಜಾರ್ಜ್ ಶಿಟ್ ಸಾಕ್ಷಿಗಳು, ಫೋಟೊಗಳು ಸದ್ಯ ನ್ಯಾಯಾಲಯದ ಬಳಿವೆ. ಇಂದು ಅವು ಹೊರಗಡೆ ಬಂದಿವೆ ಅಂದರೆ ಇದರಲ್ಲಿ ರಾಜ್ಯ ಸರ್ಕಾರ, ಸಂಭವಿಸಿದ ಇಲಾಖೆಯೆ ಬಿಡುಗಡೆ ಮಾಡಿದೆ. ಜನರ ಮನಸ್ಸು ಡೈವರ್ಟ್ ಮಾಡಲು ಇದನ್ನು ಮಾಡಲಾಗಿದೆ ಇದರಲ್ಲಿ ನಿಜಾಂಶಯಿದೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಡೈವರ್ಟ್ ಮಾಡುವ ಪ್ರಯತ್ನ ಮಾಡುತ್ತಿದೆ ಇದು ಅದರ ಒಂದು ಭಾಗ ಪೋಟೋ ಬಿಡುಗಡೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ಕೋವಿಡ್ ಹಗರಣ ಸಹ ಡೈವರ್ಟ್ ಮಾಡುವ ಉದ್ದೇಶದಿಂದ ಹೊರತರಲಾಗಿದೆ. ಒಂದು ವರ್ಷದ ಇಲ್ಲದ ಕೋವಿಡ್ ಹಗರಣ ವಿಚಾರ ಈಗ ಯಾಕೆ..? ಸಿಎಂ ಸಿದ್ದರಾಮಯ್ಯ ಸಾಚಾ ಎನ್ನುತ್ತಾರೆ. ಅರ್ಕಾವತಿ ಡಿನೋಟೊಫಿಕೇಷನ ಕೆಂಪಣ್ಣ ಆಯೋಗ ವರದಿ ನೀಡಿದೆ. ಸಿದ್ದರಾಮಯ್ಯ ಸಾಚಾ ಆಗಿದ್ದರೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿಯನ್ನು ಮಂಡನೆ ಮಾಡಿ ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಇದನ್ನು ಬಹಿರಂಗ ಮಾಡಿ ಸಾಚಾ ಅಂತ ಸಿಎಂ ತೋರಸಲಿ ಎಂದು ಶೆಟ್ಟರ್ ಸವಾಲ್ ಹಾಕಿದ್ದಾರೆ.

ಹೊರಗಡೆ ಎಲ್ಲರೂ ನಾವು ಸಿದ್ದರಾಮಯ್ಯ ನವರ ಜೊತೆಗೆ ಇದ್ದೆವೆ ಅವರೇ ಮುಂದುವರೆಯಲಿ ಅಂತ ಹೇಳಿಕೆ ನೀಡುತ್ತಾರೆ. ಆದರೆ ಒಳಗಡೆ ಕುಸ್ತಿ ಆರಂಭವಾಗಿದೆ ಇದು ಬರುವ ದಿನದಲ್ಲಿ ಇನ್ನೂ ‌ಜಾಸ್ತಿ‌ ಆಗಲಿದೆ. ಆರ್ ವಿ ದೇಶಪಾಂಡೆಯವರು ಮೊದಲು ಆರಂಭಿಸಿದರು ಈಗ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಜಿ ಪರಮೇಶ್ವರ್, ಹೀಗೆ ದೊಡ್ಡ ಲಿಸ್ಟ್ ಕ್ಯೂನಲ್ಲಿದೆ. ಮತ್ತೊಂದು ಕಡೆ ಡಿಕೆ ಶಿವಕುಮಾರ್ ನಾನೇ ಹಕ್ಕುದಾರ ಅಂತ ಒಳಗೆ ಆರಂಭಿಸಿದ್ದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಗಣೇಶ ಪ್ರಸಾದ ವಿತರಣಗೆ ಕಡ್ಡಾಯ ಪರೀಕ್ಷೆ ಸರಿಯಲ್ಲ. ಬರುವ ದಿನಗಳಲ್ಲಿ ಸಾಮೂಹಿಕ ದಾಸೋಹ, ಹೋಟೆಲ್ ಗಳಲ್ಲಿ ಪರೀಕ್ಷೆ ‌ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಮಾನದಂಡಗಳನ್ನು ರಾಜ್ಯ ಸರ್ಕಾರ ಯಾವಾಗ ಸರಿಯಾಗಿ ಜಾರಿಗೊಳಿಸುತ್ತಿದ್ದಾರೆ. ಹೆಸರು ಹೇಳೋದು ಕೇಂದ್ರ ಸರ್ಕಾರದದ್ದು ಹಿಂದೂಗಳ ಹಬ್ಬ ಬಂದಾಗ ತೊಂದರೆ ಕೊಡೋದು. ಇದರ ಹಿಂದೆ ಕಾಂಗ್ರೆಸ್ ಈಡನ್ ಅಜೆಂಡಾ ಇದೆ. ಚೆನ್ನಮ್ಮ ಮೈದಾನದಲ್ಲಿ ‌ಈ‌ ಬಾರಿ ಅದ್ದೂರಿಯಾಗಿ ನಡೆಯುತ್ತಿವೆ..ಹೀಗಾಗಿ ಕುಟುಂಬ ಸಮೇತವಾಗಿ ಬಂದು ಆರ್ಶಿವಾದ ಪಡೆದಿದ್ದೇವೆ ಎಂದು ಶೆಟ್ಟರ್ ಹೇಳಿದ್ದಾರೆ.

- Advertisement -

Latest Posts

Don't Miss