Sunday, September 8, 2024

Latest Posts

ಗಣೇಶ ಹಬ್ಬದ ಖರೀದಿ ಭರಾಟೆಯಲ್ಲಿ ಕೊವಿಡ್ ನಿಯಮ ಮರೆತ ಜನ..!

- Advertisement -

www.karnatakatv.net :ಹುಬ್ಬಳ್ಳಿ : ಕೊರೊನಾ ನಡುವೆ ಗಣೇಶ ಹಬ್ಬ ಆಚರಿಸಲು ಜನ ಮುಂದಾಗಿದ್ದಾರೆ.  ಗೌರಿ ಗಣೇಶ ಹಬ್ಬದ ಸಂಭ್ರಮ ನಗರದಾದ್ಯಂತ ಮನೆ ಮಾಡಿದ್ದು,  ಹಬ್ಬಕ್ಕೆ ಅಗತ್ಯ ವಸ್ತುಗಳ  ಖರೀದಿ ಜೋರಾಗಿದೆ‌. ಆದ್ರೆ  ಖರೀದಿ ಭರಾಟೆಯಲ್ಲಿ ಜನರು ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಹೌದು, ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಜನ ಜಾತ್ರೆಯೇ ಸೇರಿತು. ಹಬ್ಬಕ್ಕಾಗಿ ಹೂ, ಹಣ್ಣು ಖರೀದಿಗೆ ಹಿಂಡುಗಟ್ಟಲೆ ಆಗಮಿಸಿದ್ದರು. ಕೋವಿಡ್ 3ನೇ ಅಲೆಯ ಭೀತಿಯ ನಡುವೆಯೇ ಜನರ ಖರೀದಿಯಲ್ಲಿ ಮಗ್ನನಾಗಿದ್ದು,  ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದರು.

ಕರ್ನಾಟಕ ಟಿವಿ- ಹುಬ್ಬಳ್ಳಿ  

- Advertisement -

Latest Posts

Don't Miss