www.karnatakatv.net :ಜಗತ್ತಿನ ಅತ್ಯಂತ ಪವಿತ್ರ ಸಂಬoಧವೆoದರೆ ತಾಯಿ ಮಗುವಿನ ವಾತ್ಸಲ್ಯದ ಸಂಬoಧ. ಜಗತ್ತಿನಲ್ಲಿ ಈ ಒಂದು ಸಂಬoಧ ಮಾತ್ರ ಯಾವುದೇ ಸ್ವಾರ್ಥವಿರದ ಸಂಬoಧ ಅನ್ನೋದು ಸಾರ್ವಕಾಲಿಕ ಸತ್ಯ ಹಾಗೂ ಇದೇ ವಾಸ್ತವ.
ಹೌದು, ಈ ಜಗತ್ತಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಕೇವಲ ಪ್ರೀತಿ ವಾತ್ಸಲ್ಯವನ್ನ ಧಾರೆಎರೆಯೋದು ತಾಯಿ ಮಾತ್ರ. ತಾಯಿಯ ತ್ಯಾಗದ ಬಗ್ಗೆ ಬಣ್ಣಿಸೋದಕ್ಕೆ ಪದಗಳೇ ಸಿಗೋದಿಲ್ಲ. ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಸಹ ತನ್ನ ಮರಿಗಳನ್ನು ಅದೆಷ್ಟೋ ಕಷ್ಟ ಬಂದರು ಸಾಕಿ ಸಲುಹುತ್ತವೆ. ಕೆಲವು ಪ್ರಾಣಿಗಳು ತನ್ನ ಮರಿಗಳಲ್ಲದೆ ಇನ್ನಿತರ ಪ್ರಾಣಿಗಳ ಮರಿಗಳನ್ನು ಸಾಕಿ ಸಲುಹಿರುವ ಅದೆಷ್ಟೋ ಉದಾಹರಣೆಗಳಿವೆ.
ಇದೇ ರೀತಿ ರಾಯಚೂರಿನ ಲಿಂಗಸೂಗೂರು ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲೂ ಒಂದು ಹಸು ನಾಲ್ಕು ನಾಯಿ ಮರಿಗಳಿಗೆ ಹಾಲುಣಿಸುತ್ತಿದೆ. ಜಾತಿ- ಭಾಷೆ, ಅಂತಸ್ತು ಹೀಗೆ ನಾನಾ ಭೇದ ಮಾಡೋ ಈ ಸಮಾಜದಲ್ಲಿ ಈ ಗೋವು, ನಾಯಿ ಮರಿಗಳನ್ನು ತನ್ನ ಮರಿಯೆಂದೇ ಭಾವಿಸಿ, ಹಾಲುಣಿಸುತ್ತಿದೆ. ಈ ಮೂಲಕ ಪ್ರಾಣಿಗಳು ಮನುಷ್ಯರಿಗೆ ಸಾಮರಸ್ಯದ ಪಾಠ ಹೇಳಿಕೊಡ್ತಿವೆ. ಇನ್ನು ಈ ಹಸು ಮತ್ತು ನಾಯಿ ಮರಿಗಳ ಬಾಂಧವ್ಯ ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು