Monday, April 21, 2025

Latest Posts

ದಿನ ಭವಿಷ್ಯ | ಏಪ್ರಿಲ್ 20 – 2020 | ಕರ್ನಾಟಕ ಟಿ ವಿ

- Advertisement -

ಜ್ಯೋತಿಷ್ಯರು ಮಂಜುನಾಥ್ ಭಟ್

ಮೇಷ ರಾಶಿ

ಈ ದಿನ ನಿಮ್ಮ ಸಂಸಾರಿಕ ಜೀವನದಲ್ಲಿ ವಿಶೇಷ ಸಂಗತಿಗಳು ನಡೆಯಬಹುದು. ಹಿರಿಯರು ಹೊಂದಿಕೊಳ್ಳುವಲ್ಲಿ ಸಮಸ್ಯೆಗಳು ಕಾಡಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಗೌರವಾದರಗಳು ದೊರೆಯುವುದು. ವಿದ್ಯಾಭ್ಯಾಸದಲ್ಲಿ ತೃಪ್ತಿದಾಯಕ ಕಂಡುಬರಲಿವೆ ಆರ್ಥಿಕ ಸುಧಾರಣೆ, ಉದ್ಯಮ ಪ್ರಗತಿ, ಸ್ಥಿರಾಸ್ತಿ ಖರೀದಿ, ಸಹಕಾರಿಯಾಗಲಿದೆ. ಮನೆ ವಾಹನ, ಉಪಯುಕ್ತ ಸಲಕರಣೆಗಳ, ಖರೀದಿ ಅನಾಯಸವಾಗಿ ನಡೆಯಲಿದೆ. ಸಂಸ್ಥೆಯೊಂದರ ಆಡಳಿತ ಚುಕ್ಕಾಣಿ ಹಿಡಿಯುವಿರಿ. ವ್ಯಾಪಾರಿ, ಸಣ್ಣ ಉದ್ಯಮಿ ,ಸಾಹಿತಿ, ಕಲಾವಿದ ಹಾಗೂ ಮಹಿಳೆಯರ ಯೋಜನೆಗಳು, ದುಡಿಮೆಗಳಲ್ಲಿ, ಲಾಭ ಆಗಲಿವೆ.

ವೃಷಭ ರಾಶಿ

ಮಹಿಳೆಯರು ವಾಹನ ಖರೀದಿಮಾಡಲಿದ್ದಾರೆ. ವ್ಯಾಪಾರಿಗಳು ಉದ್ಯಮ ಬದಲಿಸುವ ಚಿಂತನೆ ಮಾಡುವರು. ಕ್ಷೀರ ಉದ್ಯಮಿಗಳು ಬಹುಮುಖ ಲಾಭದಲ್ಲಿರುವರು. ರೈತರು ಕೃಷಿಯಿಂದ ಒಳ್ಳೆಯ ಲಾಭದಲ್ಲಿರುವರು. ವಿದ್ಯಾರ್ಥಿಗಳು ಬಹುಮುಖ ಮಾಡಲಿದ್ದೀರಿ. ಬರಹಗಾರರು, ಉಪನ್ಯಾಸಕ, ಪ್ರವಚನಕಾರ ,ಸಾಹಿತಿ-ಕಲಾವಿದರ, ಜೀವನ ಸುಖ ಶಾಂತಿ ಗಳಿಂದ, ಸಂತೋಷವಾಗಿರುವರು. ಈ ದಿನ ಬಹುದಿನದ ಬೇಡಿಕೆ ಈಡೇರುವುದು. ಆರೋಗ್ಯಭಾಗ್ಯ ಅನುಕೂಲಕರವಾಗಿರುವುದು. ಧಾರ್ಮಿಕ ತಾಣಗಳಿಗೆ ಪ್ರವಾಸ ಮಾಡಲಿದ್ದೀರಿ. ಸ್ಥಿರಾಸ್ತಿ ಖರೀದಿಮಾಡಲಿದ್ದಾರೆ. ಸಮಸ್ಯೆಗಳು ಎದುರಿಸುವಿರಿ. ಬುದ್ಧಿವಂತಿಕೆಯಿಂದ ಪರಿಹಾರ ಹುಡುಕಿಕೊಳ್ಳಿ.

ಮಿಥುನ ರಾಶಿ

ಈ ದಿನ ನಿಮ್ಮ ಉದ್ಯಮ ಪ್ರಗತಿ ಕ್ರಿಯಾಶೀಲವಾಗಿ ಸ್ಪಂದಿಸುವುದು. ತಕ್ಕಮಟ್ಟಿಗೆ ಲಾಭದಲ್ಲಿರುವರು. ಬೇಸರದ ಘಟನೆಗಳು ಒಂದೊಂದಾಗಿ ಎದುರಿಸುವಿರಿ. ಮನೆ ನಿರ್ಮಾಣದ ಕನಸು ನನಸಾಗುವುದು. ವ್ಯವಸಾಯ ವ್ಯಾಪಾರಿ ರಂಗಕರ್ಮಿಗಳು ಕಷ್ಟಪಡುವವರು, ತಕ್ಕಮಟ್ಟಿಗೆ ಲಾಭ ಪಡೆಯುವರು. ಕುಟುಂಬದಲ್ಲಿ ಮದುವೆ ನಡೆಯಲಿದೆ. ದೂರದ ಪ್ರಯಾಣ ಬೇಡ. ಪತಿ-ಪತ್ನಿ ಕೊಂಚ ನೆಮ್ಮದಿಯಾಗಿರುವಿರಿ. ಮನಸ್ತಾಪಗಳದಿಂದ ದೂರವಿರಿ.

ಕರ್ಕಾಟಕ ರಾಶಿ

ಈ ದಿನ ಜೀವನ ಧನಾತ್ಮಕವಾಗಿ ಪರಿಣಮಿಸಲಿದೆ. ಹಿಡಿದ ಕೆಲಸಗಳು ಒಂದೊಂದಾಗಿ ಯಶಸ್ವಿ ಕಾಣಲಿದೆ. ದೂರದ ನೆಂಟರ ಆಗಮನ. ಖರ್ಚುವೆಚ್ಚಗಳ ಅಧಿಕವಾಗುವುದು. ನೌಕರಿಯಲ್ಲಿ ಬಡ್ತಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಚುರುಕಾಗಿರುವುದು ಉತ್ತಮ. ಮಗನಿಗೆ ಕನ್ಯಾ ಹುಡುಕಿಕೊಂಡು ಬರುವುದು. ವ್ಯವಸಾಯ ಆಧುನಿಕವಾಗಿ ಮಾರ್ಪಾಡಾಗುವ ದಿನವಾಗಿದೆ. ಹಿರಿಯ ನಾಗರಿಕರು ಏಕಾಂಗಿ ಕೊರಗುವರು.

ಸಿಂಹರಾಶಿ

ನಿರುದ್ಯೋಗಿಗಳಿಗೆ ಕೆಲಸದ ಭಾಗ್ಯ ಸಿಗಲಿದೆ. ಹೊಸ ಕೆಲಸ ಹುಡುಕುವಲ್ಲಿ ಯಶಸ್ವಿಯಾಗಲಿದ್ದೀರಿ. ಮನೆ ಬದಲಾವಣೆಯಾಗುವ ಸಾಧ್ಯತೆ ಇದೆ. ಹೊಸ ಮನೆ ಕಟ್ಟುವ ವಿಚಾರ ಮಾಡಲಿದ್ದೀರಿ. ಕೈಗಾರಿಕೆಗಳು ಆತ್ಮೀಯ ಸ್ನೇಹಿತರಿಂದ ತೊಂದರೆಯಾಗಲಿದೆ. ಅಲಂಕಾರಿಕ ವಸ್ತುಗಳು ಖರೀದಿ ಮಾಡಲಿದ್ದೀರಿ. ವಾಹನ ಖರೀದಿ ಯೋಗ ಯಶಸ್ವಿಯಾಗಲಿದೆ. ಹಣಕಾಸಿನಲ್ಲಿ ಏರುಪೇರು.

ಕನ್ಯಾ ರಾಶಿ

ಪಾಲುದಾರಿಕೆ ಕಾರ್ಯಗಳು ತೊಂದರೆಯಾಗಲಿದೆ. ಹಣಕಾಸಿನಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಸಂಘರ್ಷ ಹಾದಿ ತುಳಿಯಬಾರದು. ಸ್ವಾರ್ಥ ಚಿಂತನೆ ಮಾಡಿ, ತೊಂದರೆ ಅನುಭವಿಸುವಿರಿ. ಕುಟುಂಬದಲ್ಲಿ ವಿರಸ ಆಗಲಿದೆ. ಅತ್ತೆ-ಸೊಸೆ ಮಧ್ಯೆ, ವೈಮನಸು ಸೃಷ್ಟಿಯಾಗಲಿದೆ. ಜಾನುವಾರು ವ್ಯಾಪಾರ ಮಾಡುವರಿಗೆ, ಒಳ್ಳೆಯ ಲಾಭವಿದೆ. ವಿವಾಹ ಪ್ರಯತ್ನ ಯಶಸ್ವಿಯಾಗಲಿದೆ. ಲೇವಾದೇವಿಯಲ್ಲಿ ನಷ್ಟ ಅನುಭವಿಸುವಿರಿ. ಮಾನಸಿಕ ಒತ್ತಡದಿಂದ, ಆರೋಗ್ಯದಲ್ಲಿ ತೊಂದರೆಯಾಗಲಿದೆ. ಯಾವುದೇ ಕೆಲಸ ಮಾಡಿದರು ಹರಸಾಹಸ ಮಾಡಿ ಗಳಿಸಬೇಕು.

ತುಲಾ ರಾಶಿ

ಇಂದು ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ. ಹೆಂಡತಿಯ ಸಹಾಯ, ಅಣ್ಣ-ತಮ್ಮಂದಿರ ಸಹಾಯ, ಸ್ನೇಹಿತರ ಸಹಾಯ ದೊರೆಯಲಿವೆ. ದೈಹಿಕವಾಗಿ, ಮಾನಸಿಕವಾಗಿ ಸಮತೋಲನೆ ಕಾಪಾಡಿಕೊಳ್ಳಿ. ಕೃಷಿಯಲ್ಲಿ ನೀರಿನ ಸಮಸ್ಯೆ ಎದುರಿಸುವಿರಿ. ವ್ಯವಸಾಯದಿಂದ ಉತ್ತಮ ಆದಾಯ ಬರಲಿದೆ. ಮಹಿಳೆಯರಿಗೆ ಸಂಸ್ಥೆಯೊಂದರಲ್ಲಿ ಕೆಲಸ ಸಿಗಲಿದೆ. ಸರಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡಿದವರಿಗೆ ಸಿಹಿಸುದ್ದಿ ಸಿಗಲಿದೆ. ಟ್ರಾನ್ಸ್ಪೋರ್ಟ್ ವ್ಯವಹಾರದಿಂದ ದೂರವಿರಿ.

ವೃಶ್ಚಿಕ ರಾಶಿ

ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗಲಿದೆ. ನಂಬಿಕೆಯಲ್ಲಿ ನಿರಾಸೆ ಉಂಟಾಗುವುದು. ಹರಸಾಹಸ ಮಾಡಿ ಯಶಸ್ಸು ಸಿಗಲಿದೆ. ಗೃಹ ನಿರ್ಮಾಣದ ವಿಚಾರ ಮನಸ್ಸಿಗೆ ಬರಲಿದೆ. ಮಹಿಳೆಯರಿಗೆ ಮದುವೆ ಯೋಗ ಬರಲಿದೆ. ತುಂಬಾ ದಿನದಿಂದ ಕಾಡುವ ಸಮಸ್ಯೆ ,ಇಂದು ಬಗೆಹರಿಯಲಿದೆ. ಉದ್ಯಮಿಗಳು ಹೊಸ ಹೊಸ ಉದ್ಯೋಗಕ್ಕೆ ಚಾಲನೆ ನೀಡುವರು. ಮಡದಿ ಮಕ್ಕಳಿಂದ ಮನಸ್ತಾಪ ಮತ್ತು ವಿರಸ ಕಾಡಲಿದೆ. ನಿಮ್ಮ ಭಾವನೆಗಳಿಗೆ ,ಯಾರು ಸ್ಪಂದನೆ ಮಾಡುವುದಿಲ್ಲ. ಏಕಾಂಗಿ ಆಗುವಿರಿ.

ಧನಸ್ಸು ರಾಶಿ

ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆ ಎದ್ದುಕಾಣುವುದು. ಕುಟುಂಬ ಸಮೇತ, ಕೈಗಾರಿಕೆಯಲ್ಲಿ ಪಾಲ್ಗೊಂಡು ಯಶಸ್ವಿಸಿಗಲಿದೆ. ವ್ಯಾಪಾರಿಗಳು ಮತ್ತು ಕೈಗಾರಿಕಾ ಉದ್ಯಮಿಗಳಿಗೆ ಸಮಸ್ಯೆಗಳು ಕಾಡಲಿದೆ. ರೈತರು ಬೆಳೆ ಸಂರಕ್ಷಣೆ ಮುಂದಾಗುವರು. ಹಣಕಾಸಿನಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಅಣ್ಣ-ತಮ್ಮಂದಿರ ಕಡೆಯಿಂದ, ಬಂಧು ಬಳಗದಿಂದ, ಸ್ನೇಹಿತರ ಕಡೆಯಿಂದ ನಿಮಗೆ ಸಹಾಯ ಸಿಗಲಿದೆ. ಅಲಸ್ಯ ಕಾಡಲಿದೆ. ಜಾನುವಾರು ವ್ಯಾಪಾರ ಮಾಡುವವರಿಗೆ ಉತ್ತಮ ಲಾಭವಾಗಲಿದೆ. ಕುಟುಂಬ ಸದಸ್ಯರಲ್ಲಿ ಕಂಕಣಬಲ ಕೂಡಿ ಬರುವುದು.

ಮಕರ ರಾಶಿ

ಕೆಲವು ಸನ್ನಿವೇಶಗಳು ಮಾನಸಿಕವಾಗಿ ನೊಂದುವಿರಿ. ತಮ್ಮ ಉದ್ಯೋಗದಲ್ಲಿ ,ಯಾರು ಬೆಲೆ ನೀಡಲಾರರು. ಸಹೋದ್ಯೋಗಿಗಳು ಯಾರು ನಿಮಗೆ ಸಹಾಯ ಮಾಡಲಾರರು. ತಾಳ್ಮೆಯಿಂದ ಇರಿ ಧೃತಿಗೆಡಬೇಡಿ. ಅವಕಾಶಗಳು ತುಂಬಾ ಬರುವುದು , ಯಶಸ್ವಿಗೊಳಿಸಲು ಪ್ರಯತ್ನ ಮಾಡಿರಿ. ಕ್ಷುಲ್ಲಕ ಕಾರಣಕ್ಕೆ ಜಗಳ ಸೃಷ್ಟಿಯಾಗುವುದು. ತೀರ್ಥಯಾತ್ರ, ದೇವಸ್ಥಾನ ಪ್ರಯಾಣ ಬೆಳೆಸುವಿರಿ. ವೀಸಾ ಸಿಹಿಸುದ್ದಿ ಸಿಗಲಿದೆ. ವಿದೇಶ ಪ್ರಯಾಣ ಯಶಸ್ವಿಯಾಗಲಿದೆ. ವಾಹನ ಖರೀದಿ ಯೋಗ ಸಿಗಲಿದೆ.

ಕುಂಭ ರಾಶಿ

ಬದುಕಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲ ವ್ಯಕ್ತಿ ಆಗುವಿರಿ. ಆರೋಗ್ಯಕರ ಸನ್ನಿವೇಶಗಳು ಅನುಭವಿಸುವಿರಿ. ಆಪ್ತ ಬಂಧು ಜೊತೆ ದೂರದ ಪ್ರಯಾಣ ಮಾಡಲಿದ್ದೀರಿ. ದಾರಿಯಲ್ಲಿ ಶುಭಶಕುನ ಕಾಣುವಿರಿ. ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿ ಬೆಳೆಯುವಿರಿ. ರೈತರು ಉತ್ತಮ ಬೆಳೆ ತೆಗೆದುಕೊಳ್ಳುವಿರಿ. ಆದಾಯ ದುಪ್ಪಟ್ಟ ಆಗುವುದು. ಅಧಿಕಾರಿ ನಿಮ್ಮ ಜೊತೆ ಸಹಕರಿಸುವವರು. ಮನೆ ಕಟ್ಟುವ ವಿಚಾರ ,ಮನಸ್ಸಿಗೆ ಬರಲಿದೆ. ಯಾರ ಸಹಾಯವಿಲ್ಲದೆ ಮುನ್ನುಗ್ಗುವಿರಿ. ಸ್ವಯಂಚಾಲಿತ ಮನಸ್ಸಿನಿಂದ ,ಕಾರ್ಯಗಳನ್ನು ಮಾಡುವಿರಿ. ಅಡೆತಡೆ ಇಲ್ಲದೆ ಮುನ್ನುಗ್ಗುವಿರಿ. ಪತ್ನಿಯ ಮತ್ತು ಮಕ್ಕಳ ಸಹಕಾರ ಸಿಗಲಿದೆ.

ಮೀನ ರಾಶಿ

ಆಸ್ತಿಪಾಸ್ತಿಗಳಲ್ಲಿ ಕಲಹ ಸೃಷ್ಟಿಯಾಗುವುದು. ಕ್ಷುಲ್ಲಕ ಕಾರಣಕ್ಕೆ ,ಸ್ನೇಹಿತರಿಂದ ಜಗಳ ಸೃಷ್ಟಿಯಾಗುವುದು. ಬಂಧು ಬಳಗದಿಂದ ಮನಸ್ತಾಪ ಆಗಲಿದೆ. ವ್ಯಾಜ್ಯಗಳ ಪರಿಹಾರ ಮುಂದೆ ಸಾಗುವುದು. ವಿವಾಹ ಕಾರ್ಯ ಮುಂದೆ ಸಾಗುವುದು. ಪತಿ-ಪತ್ನಿ ಮನಸ್ತಾಪ ಹೆಚ್ಚಿಗೆ ಆಗಲಿದೆ. ಪ್ರೇಯಸಿ ಪ್ರಿಯತಮ, ಕಡೆಯಿಂದ ಮನಸ್ತಾಪ ಸೃಷ್ಟಿಯಾಗಲಿದೆ. ಆರ್ಥಿಕ ಮುಗ್ಗಟ್ಟು ಅನುಭವಿಸುವಿರಿ. ಯಾರು ಸಹಾಯ ಮಾಡಲಾರರು. ತಾವು ಏಕಾಂಗಿ ಆಗುವಿರಿ. ಎದೆಗುಂದದೆ ಮುಂದೆ ಸಾಗಿರಿ. ದೂರದ ಪ್ರಯಾಣ ಬೇಡ. ವಾಹನ ಖರೀದಿ ಬೇಡ.

- Advertisement -

Latest Posts

Don't Miss