Friday, October 18, 2024

Latest Posts

Darshan: ದರ್ಶನ್ ಬಗ್ಗೆ ಹಂಸಲೇಖ ಹೇಳಿಕೆ: ಮಗು ತಪ್ಪು ಮಾಡಿದ್ರೆ…

- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ ಪರಪ್ಪನ ಅಗ್ರಹಾರ ಸೇರಿ 11ನೇ ದಿನಗಳು ಕಳೆದಿವೆ. ಸೆರೆಮನೆಯಲ್ಲಿರುವ ದರ್ಶನ್‌ ಅವರನ್ನು ಕುಟುಂಬ ಹಾಗೂ ಸ್ನೇಹಿತರು ಹೋಗಿ ಭೇಟಿ ಮಾಡುತ್ತಿದ್ದಾರೆ. ಇದೀಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಹಂಸಲೇಖ, ನಟ ದರ್ಶನ್ ನನ್ನ ಮಗು ಇದ್ದಂತೆ ಎಂದಿದ್ದಾರೆ. ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನೋವು ನಾನು ತಿನ್ನುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ.

ನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು, ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌ , ದ್ವೇಷ ಅಂದರೆ ಅದು ಕ್ಯಾರೆಕ್ಟರ್. ನಾವು ಆ ತರ ಸ್ಕ್ರಿಪ್ಟ್‌ ಸಿನಿಮಾದಲ್ಲಿ ತೋರಿಸಬೇಕಷ್ಟೆ. ಆದರೆ, ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಸಿನಿಮಾ ಕ್ಯಾರೆಕ್ಟರನ್ನೂ ಕೂಡ ತರಬಾರದು. ಇದು ಕಲಾವಿದರ ಕರ್ತವ್ಯ ಎಂದು ಹಂಸಲೇಖ ಹೇಳಿದ್ದಾರೆ.

ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತಿದ್ದೇನೆ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಎಷ್ಟು ಕೀರ್ತಿ ಪಡೆದಿತ್ತು, ಎಷ್ಟೊಂದು ಪ್ರಶಸ್ತಿ ಪಡೆದುಕೊಂಡಿತ್ತು. ಮೇಲಿದ್ದವರು ಕಳಗೆ ಬೀಳಲೇಬೇಕು ಎನ್ನುವ ಮಾತಿದೆ. ಆದರೆ ಆ ರೀತಿ ಆಗೋದು ಬೇಡ. ಕೆಳಗೆ ಬಿದ್ದರೂ ಮೇಲೆ ಏಳಲು ಸಾಧ್ಯವಿದೆ. ಕೇರಳ ಚಿತ್ರೋದ್ಯಮ ಕೂಡ ಹೀಗೆ ಆಗಿತ್ತು. ಆದ್ರೆ ಅದು ಈಗ ಉತ್ತುಂಗದಲ್ಲಿದೆ ಎನ್ನುವ ಮೂಲಕ, ದರ್ಶನ್ ಪ್ರಕರಣದಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಕೆಟ್ಟ ಪ್ರಭಾವ ಬೀರಿಲ್ಲ ಎಂದು ಹಂಸಲೇಖ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

- Advertisement -

Latest Posts

Don't Miss