Film News:
ದರ್ಶನ್ ಅಭಿಮಾನದ ಕೂಗಿನ ವಿಶೇಷ ಕಥೆ ಇದು. ಖಂಡಿತವಾಗಿಯೂ ದರ್ಶನ್ ರವರು ಈ ವೀಡಿಯೋ ನೋಡಲೇಬೇಕಾದ ಸ್ಟೋರಿ ಇದು. ಹಾಗೆಯೇ ಡಿ ಬಾಸ್ ಅಭಿಮಾನಿಗಳು ದರ್ಶನ್ ಗೆ ಈ ವೀಡಿಯೋ ಸಿಗೋ ವರೆಗೂ ಶೇರ್ ಮಾಡಲೇ ಬೇಕಾದ ಸ್ಟೋರಿ ಇದು.
ದರ್ಶನ್ ಅಭಿಮಾನಿಗಳು ಡಿ ಬಾಸ್ ಅವರನ್ನು ದೇವರಂತೆ ಆರಾಧಿಸೋರು. ಅವರ ಅಭಿಮಾನಿಗಳು ಜೀವನದಲ್ಲಿ ಒಮ್ಮೆಯಾದರೂ ದಚ್ಚು ಅವರನ್ನು ನೋಡಲೇ ಬೇಕು ಎಂಬ ಅಭಿಲಾಷೆಯುನ್ನು ತನ್ನ ಮನದಲ್ಲಿ ಹುದುಗಿಸಿಟ್ಟು ಭೇಟಿಗಾಗಿ ಕಾತುರದಿಂದ ಪ್ರತಿ ದಿನ ಪ್ರತಿಕ್ಷಣ ಕಾಯುತ್ತಿರುತ್ತಾರೆ. ಇಲ್ಲೊಬ್ಬ ಅಭಿಮಾನಿಯ ದರ್ಶನ್ ಭೇಟಿಗಾಗಿ ಕಾಯುತ್ತಿರುವ ಹಂಬಲವಂತೂ ಕರುಳು ಹಿಂಡಿ ಬರುತ್ತೆ. ಖಂಡಿತವಾಗಿಯೂ ಇದು ಡಿ ಬಾಸ್ ಗೆ ತಲುಪೋ ವರೆಗೂ ಶೇರ್ ಮಾಡಲೇಬೇಕಾದ ಸ್ಟೋರಿ.
ರಾಮನಗರ ತಾಲೂಕು ಚೆನ್ನಪಟ್ಟಣದ ಭೂವಳ್ಳಿಯ ದರ್ಶನ್ ಅಪ್ಪಟ ಅಭಿಮಾನಿ ದರ್ಶನ್ ರವರು ಮನದಾಳದಿಂದ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ವಿಶೇಷ ಚೇತನರಾದ ದರ್ಶನ್ ಗೆ ಅದೊಂದೇ ಆಸೆಯಂತೆ ಆ ಆಸೆಯಿಂದಲೇ ಚಿಕ್ಕ ವಯಸ್ಸಿನಿಂದ ಇಲ್ಲಿವರೆಗೂ ಕಾಯುತ್ತಿದ್ದಾರಂತೆ. ಹೌದು ಅದುವೇ ಆ ಒಂದು ಆಸೆ ದರ್ಶನ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿಯಾಗಲೇ ಬೇಕೆಂಬ ಆಸೆಯಂತೆ.
ನಾನು ದರ್ಶನ್ ರಾಮನಗರ ತಾಲೂಕು ಚೆನ್ನರಾಯಪಟ್ಟಣ ಭೂವಳ್ಳಿ ನಿವಾಸಿ ನಾನು ವಿಶೇಷ ಚೇತನ ವ್ಯಕ್ತಿ ನನಗೆ ನಡೆದಾಡಲೂ ಆಗುವುದಿಲ್ಲ ಯಾವುದೇ ಸಮಾರಂಭಕ್ಕೂ ಹೋಗಲು ಆಗುವುದಿಲ್ಲ ಆದುದರಿಂದ ನನ್ನ ಆಸೆ ನನ್ನ ಮನದಲ್ಲಿಯೇ ಹುದುಗಿಕೊಂಡಿದೆ. ನಾನು ಚಿಕ್ಕ ವಯಸ್ಸಿನಿಂದಲೂ ದರ್ಶನ್ ಅವರ ಅಪ್ಪಟ ಅಭಿಮಾನಿ. ನಾನು ದರ್ಶನ್ ಅವರನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆಯಿಂದಲೇ ಬದುಕಿದ್ದೇನೆ ದಯವಿಟ್ಟು ನನಗೆ ಸಹಕರಿಸಿ ಎಂಬ ಮಾತುಗಳನ್ನಾಡಿ ವೀಡಿಯೋ ಮಾಡಿ ಹರಿ ಬಿಟ್ಟಿದ್ದಾರೆ.
ಇದು ನನ್ನ ಎರಡನೇ ವೀಡಿಯೋ ಮೊದಲು ನಾನು ಈ ಪ್ರಯತ್ನ ಮಾಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯೂ ದರ್ಶನ್ ಅವರ ಅಭಿಮಾನಿಗಳನ್ನು ನಂಬಿ ಈ ವೀಡಿಯೋ ಮಾಡುತ್ತಿದ್ದೇನೆ. ದಯವಿಟ್ಟು ನಾನೊಮ್ಮೆ ದರ್ಶನ್ ಅವರನ್ನು ಭೇಟಿಯಾಗುವಂತೆ ಮಾಡಿ ಎಂದು ಮುಗ್ಧ ಮನಸ್ಸಿನಿಂದ ಬೇಡಿಕೊಂಡಿರುವ ರೀತಿ ಎಂತವರನ್ನೂ ಒಮ್ಮೆ ಸ್ಥಬ್ದವಾಗಿಸುತ್ತೆ.
ಅದೊಂದು ಚಿಕ್ಕ ಆಸೆ ಎನಿಸ ಬಹುದು.ಆದರೆ ಖಂಡಿತವಾಗಿಯೂ ಆ ಮುಗ್ಧ ಮನಸ್ಸಿನ ಅಪ್ಪಟ ಅಭಿಮಾನಕ್ಕೆ ಮಾತ್ರ ಹ್ಯಾಟ್ಸಾಪ್ ಹೇಳಲೇಬೇಕು. ತಾನೊಬ್ಬ ವಿಶೇಷ ಚೇತನನಾಗಿದ್ದರೂ ದರ್ಶನ್ ಭೇಟಿಗಾಗಿ ಕಾಯುತ್ತಿರೋ ಆ ಅಮಾಯಕ ಅಭಿಮಾನಕ್ಕೆ ನಾವು ಬೆಂಬಲಿಸಲೇ ಬೇಕು.
ವೀಕ್ಷಕರೇ ಈ ಅಭಿಮಾನಿ ಪರವಾಗಿ ನಮದೂ ಒಂದು ಮನವಿ ಇಂತಹ ಅಪ್ಪಟ ಅಭಿಮಾನಿ ಆಸೆ ಎಂದಿಗೂ ನಿರಾಸೆ ಆಗಬಾರದು ಅದಕ್ಕೆ ನೀವು ಮಾಡಬೇಕಿರೋದು ಇಷ್ಟೇ ಈ ವೀಡಿಯೋ ಡಿ ಬಾಸ್ ದರ್ಶನ್ ಗೆ ಹಾಗು ದರ್ಶನ್ ಅಭಿಮಾನಿಗಳಿಗೆ ತಲುಪುವ ವರೆಗೂ ಸಾಧ್ಯವಾದಷ್ಟು ಶೇರ್ ಮಾಡಿ.