Dharwad News: ಧಾರವಾಡ: ಧಾರವಾಡದಲ್ಲಿ ನಕಲಿ ನೋಟು ನೀಡಿ, ಪಂಗನಾಮ ಹಾಕಿರುವ ಘಟನೆ ನಡೆದಿದ್ದು, ವಂಚಕರು ಪೇಪರ್ ಬಂಡಲ್ ಗಳನ್ನ ನೋಟುಗಳಂತೆ ಬ್ಯಾಗನಲ್ಲಿ ಕಟ್ಟಿ ತಂದು ಮೋಸ ಮಾಡಿದ್ದಾರೆ.
ಧಾರವಾಡ ನಗರದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, 2 ಪಾರ್ಟಿ ಜಮೀನು ವ್ಯವಹಾರ ಹಿನ್ನೆಲೆ ಧಾರವಾಡ ಉಪನೊಂದಣಾಧಿಕಾರಿ ಕಚೇರಿಗೆ ಬಂದಿದ್ದು, 2023 ರಲ್ಲಿ ಆರು ಏಕರೆ ಜಮೀನು ಖದೀರಿ ನೊಂದಣಿ ಮಾಡಿಸಿದ್ದರು. ಈಗ ಜಮೀನು ಮಾಲೀಕರು ಹಿಂದೆಟು ಹಾಕಿದ ಹಿನ್ನೆಲೆ ವ್ಯವಹಾರ ರದ್ದು ಆಗಿತ್ತು.
ಪುಡಕಲಕಟ್ಟಿ ಗ್ರಾಮಸ್ಥ, ಮಾಜಿ ಯೋಧನಾಗಿದ್ದ ಸುರೇಶ್ ತಡಕೋಡ ಜಮೀನು ಖರೀದಿ ಮಾಡಿದ್ದ. ಧರ್ಮೇಂದ್ರ ರಾಯನಗೌಡ್ರ, ಸುರೇಶ ಬಳಗೇರ ಎಂಬುವವರಿಗೂ ಈ ಜಮೀನು ಸೇರಿತ್ತು. ಉಪನೊಂದಣಾಧಿಕಾರಿ ಕಚೇರಿಗೆ ಬಂದಾಗ ಎರಡೂ ಪಾರ್ಟಿ ಅಸಲಿ ನೋಟು ಎಣಿಸಿತ್ತು. ಆದರೆ ನಂತರ ಬ್ಯಾಗ್ ಬದಲಾವಣೆಯಾಗಿತ್ತು.ಬ್ಯಾಗ್ ಕಾರಿನಲ್ಲಿ ತಂದು ನೋಡಿದ ಮೇಲೆ ಪೇಪರ್ ಬಂಡಲ್ ನೋಡಿ ಮಾಜಿ ಯೋಧ ಸುರೇಶ್ ಶಾಕ್ ಆಗಿದ್ದಾರೆ.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ದಾನೇಶ್ವರಿ ಮುದ್ದಿ ಎಂಬುವವರು 19 ಲಕ್ಷ ಹಣ ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ಪೇಪರ್ ಬಂಡಲ್ ಸುತ್ತಿ ಬ್ಯಾಗ್ ನಲ್ಲಿ ಇಟ್ಟು ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಸುರೇಶ್ ಸ್ಥಳಕ್ಕೆ ಪೋಲೀಸರನ್ನು ಕರೆಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.