Thursday, June 19, 2025

Latest Posts

ಉಸಿರು ಫೌಂಡೇಶನ್‌ನಿಂದ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೇಣಿಗೆ

- Advertisement -

Gadag News: ಪ್ರತೀ ವರ್ಷದಂತೆ ಈ ವರ್ಷ ಕೂಡ ಉಸಿರು ಸೋಶಿಯಲ್ ವೆಲ್‌ಫೇರ್ ಫೌಂಡೇಶನ್ ವತಿಯಿಂದ ಈ ವರ್ಷವೂ ಗದಗಿನಲ್ಲಿ ಕೂರಿಸುವ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೇಣಿಗೆ ನೀಡಲಾಗುತ್ತಿದೆ.

ಕನಿಷ್ಟ 25 ಜನರನ್ನು ಮಾತ್ರ ಒಳಗೊಂಡಿರುವ ಗಣೇಶ ಮಂಡಳಿಗಳಿಗೆ ಅವಕಾಶವಿದ್ದು, 121 ಗಣೇಶ ಮಂಡಳಿಗಳಿಗೆ ಉಸಿರು ಫೌಂಡೇಶನ್ ದೇಣಿಗೆ ನೀಡಲಿದೆ. ಗದಗದ ಅಂಬೇಡ್ಕರ್ ಭವನದ ಬಳಿ ಇರುವ ಉಸಿರು ಫೌಂಡೇಶನ್ ಕಚೇರಿಯಲ್ಲಿ ಈ ಬಗ್ಗೆ ತಿಳಿದುಕೊಳ್ಳಬೇಕು. ಅಲ್ಲಿಗೆ ಈ ಸಂಸ್ಥೆಯ ಸದಸ್ಯರಾಗಿರುವ ಮಲ್ಲಿಕಾರ್ಜುನ್ ಕಿರೇಸೂರ್ ಅವರನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅವರ ಮೊಬೈಲ ನಂಬರ್: 8971004429, 9342339999.

ಬರೀ ದೇಣಿಗೆ ಅಲ್ಲದೇ, ದೇಣಿಗೆ ಪಡೆಯುವ ಗಣೇಶ ಮಂಡಳಿಗೆ ಸಾವರ್ಕರ್‌ ಮತ್ತು ತಿಲಕರಿರುವ ಚಿತ್ರದ ದೊಡ್ಡ ಗಣಪತಿಯ ಬ್ಯಾನರ್ ಕೂಡ ಕೊಡಲಾಗುತ್ತದೆ ಎಂದು ಉಸಿರು ಫೌಂಡೇಶನ್ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡರಾದ ಶರಣ್ ಪಾಟೀಲ್‌ ಹೇಳಿದ್ದಾರೆ.

- Advertisement -

Latest Posts

Don't Miss